ಕೋಝಿಕ್ಕೋಡ್: ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಡಿ.ವೈ.ಎಫ್.ಐ. ಕಾರ್ಯಕರ್ತರಿಂದ ಥಳಿತಕ್ಕೊಳಗಾದ ಭದ್ರತಾ ಸಿಬ್ಬಂದಿಯ ವಕೀಲರಿಗೆ ಬೆದರಿಕೆ ಬಂದಿದ್ದು ಆತಂಕಮೂಡಿಸಿದೆ.
ಸುಪ್ರೀಂ ಕೋರ್ಟ್ ವಕೀಲರಾದ ಬಬಿಲಾ ಉಮ್ಮರ್ ಖಾನ್ ಅವರಿಗೆ ಬೆದರಿಕೆ ಬಂದಿದೆ.
ಕೈ ಹಾಗೂ ಕಾಲುಗಳು ಕತ್ತರಿಸಲ್ಪಡುವುದೆಂದೂ ಮಗಳ ಸಾಕಲು ಬಳಿಕ ಪ್ಲೆಕ್ಸ್ ಹಾಕಿ ಬೇಡಿ ಜೀವನ ನಡೆಸಬೇಕಾದಿತೆಂದು ಬೆದರಿಕೆ ಹಾಕಲಾಗಿದೆ.
ಕೋಝಿಕ್ಕೋಡ್ ಜ್ಯುಡಿಷಿಯಲ್ ಫಸ್ಟ್ ಕ್ಲಾಸ್ ಮ್ಯಾಜಿಸ್ಟ್ರೇಟ್ ಕೋರ್ಟ್ 5ರಲ್ಲಿ ಭದ್ರತಾ ಸಿಬ್ಬಂದಿಗೆ ಥಳಿಸಿದ ಪ್ರಕರಣದಲ್ಲಿ ಖಾಸಗಿ ಅರ್ಜಿ ಸಲ್ಲಿಸಲು ಬಂದಿದ್ದಾಗ ಬೆದರಿಕೆ ಒಡ್ಡಲಾಗಿದೆ. ನ್ಯಾಯಾಲಯದ ಮೆಟ್ಟಿಲುಗಳ ಮೇಲಿದ್ದ ಜನರ ಗುಂಪಿನಿಂದ ಬೆದರಿಕೆ ಬಂದಿದ್ದು, ಜನಸಂದಣಿಯಿಂದಾಗಿ ವ್ಯಕ್ತಿಯನ್ನು ಗುರುತಿಸಲಾಗಲಿಲ್ಲ ಎಂದು ಹೇಳಲಾಗಿದೆ.
ಇದೇ ವೇಳೆ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಘಟನೆಯಲ್ಲಿ ಆರೋಪಿ ಡಿ.ವೈ.ಎಫ್.ಐ. ಕಾರ್ಯಕರ್ತರ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಡಿ.ವೈ.ಎಫ್.ಐ ರಾಜ್ಯ ಸಮಿತಿ ಸದಸ್ಯ ಅರುಣ್ ಕುಮಾರ್ ಸೇರಿದಂತೆ ಐವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.
ಕೈ ಮತ್ತು ಕಾಲುಗಳನ್ನು ಕತ್ತರಿಸಲಾಗುವುದು: ಡಿವೈಎಫ್ಐ ಆರೋಪಿಗಳಾಗಿರುವ ಪ್ರಕರಣದಲ್ಲಿ ಸಂತ್ರಸ್ತರ ಪರ ವಕೀಲರಿಗೆ ಬೆದರಿಕೆ
0
September 16, 2022
Tags