HEALTH TIPS

ತುಳುವೆರೆ ಆಯನೋ ಕೂಟದ ನೂತನ ಸಮಿತಿ ರಚನೆ: ಸಾರಥಿಗಳ ಆಯ್ಕೆ


           ಬದಿಯಡ್ಕ: ತುಳುನಾಡು ನುಡಿ ಹಾಗೂ ಸಂಸ್ಕøತಿಯ ಪುನರ್ ಜೀವನಕ್ಕಾಗಿ ಬದಿಯಡ್ಕ ಕೇಂದ್ರಿಕರಿಸಿ ಹಲವಾರು ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದ್ದ ತುಳುವೆರೆ ಆಯನೋ ಕೂಟದ ನೂತನ ಅಧ್ಯಕ್ಷರಾಗಿ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಮುಂದಾಳು ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲ್, ಪ್ರ.ಕಾರ್ಯದರ್ಶಿಯಾಗಿ ಜಯ ಮಣಿಯಂಪಾರೆ, ಕೋಶಾಧಿಕಾರಿಯಾಗಿ ಪ್ರಭಾವತಿ ಕೆದಿಲಾಯ ಪುಂಡೂರು ಆಯ್ಕೆಯಾಗಿದ್ದಾರೆ.
      ಈಬಗ್ಗೆ ಶಾಸ್ತ್ರೀಸ್ ಕಂಪೌಂಡ್ ನ ಸೀತಾರಾಮ ಬಿಲ್ಡಿಂಗ್ ನಲ್ಲಿ ನಡೆದ ಸಭೆಯಲ್ಲಿ ಸಮಿತಿಯ ನಿಕಟಪೂರ್ವ ಅಧ್ಯಕ್ಷ ನ್ಯಾಯವಾದಿ ಥೋಮಸ್ ಡಿಸೋಜ ಅಧ್ಯಕ್ಷತೆವಹಿಸಿದ್ದರು. ಪ್ರೊ. ಶ್ರೀನಾಥ್ ಕಾಸರಗೋಡು, ಡಾ.ರಾಜೇಶ್ ಆಳ್ವ ಬದಿಯಡ್ಕ, ಭಾಸ್ಕರ ಕೆ,ಪ್ರಜ್ವಲ್ ಆಳ್ವ, ಶಂಕರ ಸ್ವಾಮಿಕೃಪಾ ಮೊದಲಾದವರು ಪಾಲ್ಗೊಂಡಿದ್ದರು. ನೂತನ ಸಮಿತಿ ಉಪಾಧ್ಯಕ್ಷರಾಗಿ ಭಾಸ್ಕರ ಕಾಸರಗೋಡು, ಶ್ರೀನಾಥ್ ಕಾಸರಗೋಡು, ಕಾರ್ಯದರ್ಶಿಗಳಾಗಿ ಶಂಕರ ಸ್ವಾಮಿ ಕೃಪಾ, ರವೀಂದ್ರ ರೈ ಮಲ್ಲಾವರ, ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಡಾ.ಶ್ರೀನಿಧಿ ಸರಳಾಯ ಬದಿಯಡ್ಕ, ಶ್ರೀನಿವಾಸ ಆಳ್ವ ಕಳತ್ತೂರು, ಸುಂದರ ಭಾರಡ್ಕ, ಕೃಷ್ಣ ಡಿ.ಬೆಳಿಂಜ, ಡಾ.ರಾಜೇಶ್ ಆಳ್ವ ಅವರನ್ನು ಆಯ್ಕೆ ಮಾಡಲಾಯಿತು. ಅಕ್ಟೋಬರ್ 10ರಂದು ಅನಂತಪುರದಲ್ಲಿ ನಡೆಯಲಿರುವ ತುಳುಲಿಪಿ ಸಂಶೋಧಕ, ವಿದ್ವಾಂಸ, ಕೇರಳ ತುಳು ಅಕಾಡೆಮಿಯ ಪ್ರಥಮ ಅಧ್ಯಕ್ಷ, ತುಳುರತ್ನ ಪುಂಡೂರು ಡಾ. ವೆಂಕಟರಾಜ ಪುಣ್ಚಿತ್ತಾಯರ ಜಯಂತಿ ಕಾರ್ಯಕ್ರಮದಂಗವಾಗಿ ಜರಗುವ "ಪುವೆಂಪು ನೆಂಪು- 22" ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಭೆಯು ನಿರ್ಧರಿಸಿದೆ.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries