HEALTH TIPS

ಗ್ರಾಮ ಕಚೇರಿಗಳಿಗೆ ಜಿಲ್ಲಾಧಿಕಾರಿ ಭೇಟಿ: ದೂರು ಸ್ವೀಕಾರ



           ಕಾಸರಗೋಡು: ಅಕ್ಟೋಬರ್ 6 ರಿಂದ ಹೊಸದುರ್ಗ ಮತ್ತು ಕಾಸರಗೋಡು ತಾಲೂಕಿನ ಗ್ರಾಮಗಳಿಗೆ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ಭೇಟಿ ನೀಡಲಿದ್ದು, ಈ ಸಂದರ್ಭ ಸಾರ್ವಜನಿಕರು ಗ್ರಾಮ ಕಚೇರಿಗೆ ಸಂಬಂಧಿಸಿದ ದೂರುಗಳು ಮತ್ತು ಕುಂದುಕೊರತೆಗಳನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬಹುದು. ದೂರು, ಮನವಿ ನೀಡುವವರು ದೂರವಾಣಿ ಸಂಖ್ಯೆ (04994255010, 8281753733) ಅಥವಾ ಇಮೇಲ್ ವಿಳಾಸಕ್ಕೆ ಮಾಹಿತಿ ನೀಡಬಹುದಾಗಿದೆ.
            ಅಕ್ಟೋಬರ್ 6 ರಂದು ಚೆಂಗಳ ಮತ್ತು ಪಾಡಿ-ನೆಕ್ರಾಜೆ ಗ್ರಾಮಗಳ ದೂರುಗಳನ್ನು ಚೆಂಗಳದಲ್ಲಿ ಸ್ವೀಕರಿಸಲಾಗುವುದು. ಅಕ್ಟೋಬರ್ 7 ಉದುಮ, ಬಾರ ಗ್ರಾಮಗಳ ದೂರುಗಳನ್ನು ಉದುಮದಲ್ಲಿ, 13 ರಂದು  ಕಾಸರಗೋಡು, ಕಳನಾಡು ಮತ್ತು ತಳಂಗರ ಗ್ರಾಮಗಳ ದೂರನ್ನು ಕಾಸರಗೋಡಲ್ಲಿ, 14 ರಂದು ಪನಯಾಲ್ ಮತ್ತು ಪೆರಿಯ ಗ್ರಾಮಗಳಿಗೆ ಸಂಬಂಧಿಸಿದ ದೂರುಗಳನ್ನು ಪೆರಿಯದಲ್ಲಿ ಸ್ವೀಕರಿಸಲಾಗುವುದು. ಅಕ್ಟೋಬರ್ 20 ರಂದು ಕೂಡ್ಲು ಮತ್ತು ಮಧೂರು ಗ್ರಾಮಗಳ ದೂರನ್ನು ಮಧೂರು, 21 ರಂದು ಕೋಟಿಕುಳಂ ಮತ್ತು ಪಳ್ಳಿಕ್ಕರ ಗ್ರಾಮಗಳ ದೂರನ್ನು ಕೋಟಿಕುಳಂನಲ್ಲಿ, 27 ರಂದು ನೆಟ್ಟಣಿಗೆ ಮತ್ತು ಕುಂಬ್ಡಾಜೆ ಗ್ರಾಮಗಳಿಗೆ ಸಂಬಂಧಿಸಿದ ದೂರುಗಳನ್ನು ಕುಂಬ್ಡಾಜೆಯಲ್ಲಿ, 28 ರಂದು ಅಜಾನೂರು, ಬಲ್ಲ ಗ್ರಾಮಗಳ ದೂರನ್ನು ಅಜನೂರಿನಲ್ಲಿ,  ನವೆಂಬರ್ 3 ರಂದು ಅಜಾನೂರು ಮತ್ತು ತೇಕಿಲ್‍ನ ಗ್ರಾಮಗಳ ದೂರು ಸ್ವೀಕಾರ ತೆಕ್ಕಿಲ್‍ನಲ್ಲಿ, ಕಾಞಂಗಾಡ್ ಮತ್ತು ಚಿತ್ತಾರಿ ಗ್ರಾಮಗಳಿಗೆ ನವೆಂಬರ್ 4 ರಂದು, 10 ರಂದು ಬೇಳ ಮತ್ತು ಬದಿಯಡ್ಕ ಗ್ರಾಮ,  11 ರಂದು ಅಂಬಲತ್ತರ ಮತ್ತು ಪುಲ್ಲೂರು ಗ್ರಾಮಗಳಿಗೆ, 17 ರಂದು ಪುಲ್ಲೂರು ಆದೂರು ಮತ್ತು ಮುಳಿಯಾರ್ ಗ್ರಾಮಗಳಲ್ಲಿ ದೂರು ಸಲ್ಲಿಸಬಹುದಾಗಿದೆ.
              ಗ್ರಾಮ ಕಚೇರಿಗಳಿಗೆ ಜಿಲ್ಲಾಧಿಕಾರಿ ಭೇಟಿ: ದೂರು ಸ್ವೀಕಾರ

           ಕಾಸರಗೋಡು: ಅಕ್ಟೋಬರ್ 6 ರಿಂದ ಹೊಸದುರ್ಗ ಮತ್ತು ಕಾಸರಗೋಡು ತಾಲೂಕಿನ ಗ್ರಾಮಗಳಿಗೆ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ಭೇಟಿ ನೀಡಲಿದ್ದು, ಈ ಸಂದರ್ಭ ಸಾರ್ವಜನಿಕರು ಗ್ರಾಮ ಕಚೇರಿಗೆ ಸಂಬಂಧಿಸಿದ ದೂರುಗಳು ಮತ್ತು ಕುಂದುಕೊರತೆಗಳನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬಹುದು. ದೂರು, ಮನವಿ ನೀಡುವವರು ದೂರವಾಣಿ ಸಂಖ್ಯೆ (04994255010, 8281753733) ಅಥವಾ ಇಮೇಲ್ ವಿಳಾಸಕ್ಕೆ ಮಾಹಿತಿ ನೀಡಬಹುದಾಗಿದೆ.
            ಅಕ್ಟೋಬರ್ 6 ರಂದು ಚೆಂಗಳ ಮತ್ತು ಪಾಡಿ-ನೆಕ್ರಾಜೆ ಗ್ರಾಮಗಳ ದೂರುಗಳನ್ನು ಚೆಂಗಳದಲ್ಲಿ ಸ್ವೀಕರಿಸಲಾಗುವುದು. ಅಕ್ಟೋಬರ್ 7 ಉದುಮ, ಬಾರ ಗ್ರಾಮಗಳ ದೂರುಗಳನ್ನು ಉದುಮದಲ್ಲಿ, 13 ರಂದು  ಕಾಸರಗೋಡು, ಕಳನಾಡು ಮತ್ತು ತಳಂಗರ ಗ್ರಾಮಗಳ ದೂರನ್ನು ಕಾಸರಗೋಡಲ್ಲಿ, 14 ರಂದು ಪನಯಾಲ್ ಮತ್ತು ಪೆರಿಯ ಗ್ರಾಮಗಳಿಗೆ ಸಂಬಂಧಿಸಿದ ದೂರುಗಳನ್ನು ಪೆರಿಯದಲ್ಲಿ ಸ್ವೀಕರಿಸಲಾಗುವುದು. ಅಕ್ಟೋಬರ್ 20 ರಂದು ಕೂಡ್ಲು ಮತ್ತು ಮಧೂರು ಗ್ರಾಮಗಳ ದೂರನ್ನು ಮಧೂರು, 21 ರಂದು ಕೋಟಿಕುಳಂ ಮತ್ತು ಪಳ್ಳಿಕ್ಕರ ಗ್ರಾಮಗಳ ದೂರನ್ನು ಕೋಟಿಕುಳಂನಲ್ಲಿ, 27 ರಂದು ನೆಟ್ಟಣಿಗೆ ಮತ್ತು ಕುಂಬ್ಡಾಜೆ ಗ್ರಾಮಗಳಿಗೆ ಸಂಬಂಧಿಸಿದ ದೂರುಗಳನ್ನು ಕುಂಬ್ಡಾಜೆಯಲ್ಲಿ, 28 ರಂದು ಅಜಾನೂರು, ಬಲ್ಲ ಗ್ರಾಮಗಳ ದೂರನ್ನು ಅಜನೂರಿನಲ್ಲಿ,  ನವೆಂಬರ್ 3 ರಂದು ಅಜಾನೂರು ಮತ್ತು ತೇಕಿಲ್‍ನ ಗ್ರಾಮಗಳ ದೂರು ಸ್ವೀಕಾರ ತೆಕ್ಕಿಲ್‍ನಲ್ಲಿ, ಕಾಞಂಗಾಡ್ ಮತ್ತು ಚಿತ್ತಾರಿ ಗ್ರಾಮಗಳಿಗೆ ನವೆಂಬರ್ 4 ರಂದು, 10 ರಂದು ಬೇಳ ಮತ್ತು ಬದಿಯಡ್ಕ ಗ್ರಾಮ,  11 ರಂದು ಅಂಬಲತ್ತರ ಮತ್ತು ಪುಲ್ಲೂರು ಗ್ರಾಮಗಳಿಗೆ, 17 ರಂದು ಪುಲ್ಲೂರು ಆದೂರು ಮತ್ತು ಮುಳಿಯಾರ್ ಗ್ರಾಮಗಳಲ್ಲಿ ದೂರು ಸಲ್ಲಿಸಬಹುದಾಗಿದೆ.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries