HEALTH TIPS

ಆಜಾದ್ ಕಾಶ್ಮೀರ ಉಲ್ಲೇಖದಲ್ಲಿ ಸಿಲುಕಿದ ಕೆ.ಟಿ.ಜಲೀಲ್: ಪ್ರಕರಣವನ್ನು ಕೈಗೆತ್ತಿಕೊಳ್ಳಲು ದೆಹಲಿ ಕೋರ್ಟ್ ಆದೇಶ


              ನವದೆಹಲಿ: ಆಜಾದ್ ಕಾಶ್ಮೀರಕ್ಕೆ ಸಂಬಂಧಿಸಿದಂತೆ ಶಾಸಕ ಕೆ.ಟಿ.ಜಲೀಲ್ ವಿರುದ್ಧ ಪ್ರಕರಣ ದಾಖಲಿಸಲು ಆದೇಶ ನೀಡಲಾಗಿದೆ. ದೆಹಲಿ ರೋಸ್ ಅವೆನ್ಯೂ ಕೋರ್ಟ್ ಪ್ರಕರಣವನ್ನು ಕೈಗೆತ್ತಿಕೊಳ್ಳಲು ಆದೇಶಿಸಿದೆ.
           ಸುಪ್ರೀಂ ಕೋರ್ಟ್‍ನ ವಕೀಲ ಜಿ.ಎಸ್.ಮಣಿ ಸಲ್ಲಿಸಿದ್ದ ಅರ್ಜಿಗೆ ನ್ಯಾಯಾಲಯದ ಅನುಕೂಲಕರ ತೀರ್ಪು ಈ ಮೂಲಕ ನೀಡಿದೆ.
          ಜಲೀಲ್ ವಿರುದ್ಧ ದೇಶದ್ರೋಹ ಸೇರಿದಂತೆ ಗಂಭೀರ ಆರೋಪದಡಿ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ ಮಣಿ ನ್ಯಾಯಾಲಯದ ಮೊರೆ ಹೋಗಿದ್ದರು. ಇದೇ ಪ್ರಕರಣಗಳಲ್ಲಿ ನ್ಯಾಯಾಲಯ ನೀಡಿದ ಆದೇಶವನ್ನೂ ಅವರು ಸಲ್ಲಿಸಿದ್ದರು. ಇದಲ್ಲದೇ ಜಲೀಲ್ ವಿರುದ್ಧ ಪೋಲೀಸರು ನ್ಯಾಯಾಲಯಕ್ಕೆ ವರದಿಯನ್ನೂ ಸಲ್ಲಿಸಿದ್ದರು.
ಇವೆಲ್ಲವನ್ನೂ ಪರಿಗಣಿಸಿ ನ್ಯಾಯಾಲಯ ಪ್ರಕ್ರಿಯೆ ನಡೆಸಿತ್ತು.
       ಸೂಕ್ತ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣವನ್ನು ಕೈಗೆತ್ತಿಕೊಳ್ಳುವಂತೆ ನ್ಯಾಯಾಲಯ ಸೂಚಿಸಿದೆ. ಎಫ್‍ಐಆರ್ ದಾಖಲಿಸುವಂತೆಯೂ ಸೂಚಿಸಲಾಗಿತ್ತು. ಈ ಪರಿಸ್ಥಿತಿಯಲ್ಲಿ, ದೆಹಲಿ ಪೋಲೀಸರು ಜಲೀಲ್ ಅನ್ನು ಬಂಧಿಸುವುದು ಸೇರಿದಂತೆ ಕ್ರಮಗಳನ್ನು ತಕ್ಷಣ ತೆಗೆದುಕೊಳ್ಳುವ ಸಾರ್ಧಯತೆಗಳಿವೆ.
        ಜಿಎಸ್ ಮಣಿ ದೆಹಲಿ ತಿಲಕ್ ಮಾರ್ಗ್ ಪೋಲೀಸರಿಗೆ ದೂರು ನೀಡಿದ್ದಾರೆ. ದೂರಿನಲ್ಲಿ ಜಲೀಲ್ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ಪೋಲೀಸರು ಕಾನೂನು ಸಲಹೆ ಕೇಳಿದ್ದರು. ಮುಂದಿನ ದಿನದಲ್ಲಿ ನ್ಯಾಯಾಲಯ ಅರ್ಜಿಯ ಅಂತಿಮ ತೀರ್ಪು ನೀಡಲಿದೆ.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries