ಕಾಸರಗೋಡು: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನ(ರಿ) ವತಿಯಿಂದ ಅರ್ಥಾಂತರಂಗ-14'ತಾಳಮದ್ದಳೆಯಲ್ಲಿ ಕರ್ಣಪರ್ವ'ಒಂದು ಸಂವಾದ ಕಾರ್ಯಕ್ರಮ ಅ. 30ರಂದು ಬೆಳಗ್ಗೆ 9.30ಕ್ಕೆ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಭವನದಲ್ಲಿ ಜರುಗಲಿದೆ.
ಪ್ರತಿಷ್ಠಾನ ವತಿಯಿಂದ ಈಗಾಗಲೇ ವಿವಿಧ ಕೇಂದ್ರಗಳಲ್ಲಿ ಯಕ್ಷಗಾನ ತಾಳಮದ್ದಳೆ ಕ್ಷೇತ್ರದ ಸಮಗ್ರ ಬೆಳವಣಿಗೆಗೆ ಪೂರಕವಾಗಿ ಅರ್ಥಾಂತರಂಗ ಎಂಬ ವಿಶಿಷ್ಟ ಅಧ್ಯಯನ ಕಾರ್ಯಾಗಾರವನ್ನು ಆಯೋಜಿಸಲಾಗುತ್ತಿದ್ದು, 14ನೇ ಕಾರ್ಯಕ್ರಮ ಇದಾಗಿದೆ.
ಗೆರುಸೊಪ್ಪೆ ಶಾಂತಪ್ಪಯ್ಯ ಅವರ ಕರ್ಣಪರ್ವ(ಕೃಷ್ಣಾರ್ಜುನರ ಕಾಳಗ)ಪ್ರಸಂಗದ ಕುರಿತು ಪ್ರಾತ್ಯಕ್ಷಿಕೆಯೊಂದಿಗೆ ಕಾರ್ಯಾಗಾರ ನಡೆಯಲಿರುವುದು. ಹಿರಿಯ ಅರ್ಥಧಾರಿ ಡಾ. ರಮಾನಂದ ಬನಾರಿ ಸಮಾರಂಭ ಉದ್ಘಾಟಿಸುವರು. ಕರ್ನಾಟಕ ಯಕ್ಷಗಾನ ಅಕಡಮಿ ಮಾಜಿ ಅಧ್ಯಕ್ಷ ಪ್ರೊ. ಎಂ.ಎಲ್ ಹೆಗಡೆ ಅಧ್ಯಕ್ಷತೆ ವಹಿಸುವರು. ಗುತ್ತಿಗೆದಾರ ಡಿ.ಆರ್ ರಾಜು ಕಾರ್ಕಳ ಹಾಗೂ ಉದ್ಯಮಿ ಪ್ರೇಮನಾಥ ಮಾರ್ಲ ಮೂಡಬಿದರೆ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಹಲವು ಮಂದಿ ವಿದ್ವಾಂಸರು, ಕಲಾವಿದರು ಪಾಲ್ಗೊಳ್ಳುವರು.
ನಾಳೆ ಸಿರಿಬಾಗಿಲು ಸಾಂಸ್ಕøತಿಕ ಭವನದಲ್ಲಿಅರ್ಥಾಂತರಂಗ-14: 'ತಾಳಮದ್ದಳೆಯಲ್ಲಿ ಕರ್ಣಪರ್ವ'ಒಂದು ಸಂವಾದ
0
October 28, 2022