ಕಾಸರಗೋಡು: ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡಮಿ(ರಿ)ಕಾಸರಗೋಡು ಯುಎಇ ಘಟಕ ದುಬೈ ವತಿಯಿಂದ 'ದುಬೈ ಗಡಿನಾಡ ಉತ್ಸವ-2022' ನ. 20ರಂದು ದುಬೈ ಕ್ರೆಸೆಂಟ್ ಶಾಲಾ ಮೈದಾನದಲ್ಲಿ ಜರುಗಲಿರುವುದು. ದುಬೈಯಲ್ಲಿ ನೆಲೆಸಿರುವ ಕಾಸರಗೋಡಿನ ಕನ್ನಡ ಭಾಷಿಗರನ್ನು ಒಟ್ಟುಸೇರಿಸಿ ಅವರ ಸಾಂಸ್ಕøತಿಕ ಸಾಹಿತ್ಯಿಕ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಯಶಸ್ವಿಗಾಗಿ ದುಬೈಯಲ್ಲಿ ಸಮಾಲೋಚನಾ ಸಭೆ ಇತ್ತೀಚೆಗೆ ಜರುಗಿತು. ದುಬೈ ಗಡಿನಾಡು ಉತ್ಸವವನ್ನು ಯಶಸ್ವಿಯಾಗಿ ನಡೆಸುವ ನಿಟ್ಟಿನಲ್ಲಿ ಸಭೆ ಆಯೋಜಿಸಲಾಗಿತ್ತು.
ಈ ಸಂದರ್ಭ ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಮೂಲಕ ಹೊರತರಲಾದ ಮಾಧ್ಯಮ ಕೈಪಿಡಿಯನ್ನು ಬಿಡುಗಡೆಗೊಳಿಸಲಾಯಿತು. ಅಮರ್ದೀಪ್ ಕಲ್ಲೂರಾಯ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಅಧ್ಯಕ್ಷ ಎ.ಆರ್ ಸುಬ್ಬಯ್ಯಕಟ್ಟೆ, ಪದಾಧಿಕಾರಿ ಜೆಡ್.ಎ ಕಯ್ಯಾರ್, ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಡಮಿ(ರಿ)ಕಾಸರಗೋಡು ಯುಎಇ ಘಟಕ ದುಬೈ ಘಟಕ ಪದಾಧಿಕಾರಿಗಳು ಉಪಸ್ಥೀತರಿದ್ದರು.
'ದುಬೈ ಗಡಿನಾಡ ಉತ್ಸವ-2022' ಕಾರ್ಯಕ್ರಮದ ಯಶಸ್ವಿಗಾಗಿ ಉತ್ಸವ ಸಮಿತಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಮರ್ದೀಪ್ ಕಲ್ಲೂರಾಯ ಗೌರವಾಧ್ಯಕ್ಷ, ವಕೀಲ ಇಬ್ರಾಹಿಂ ಖಲೀಲ್ ಅರಿಮಲ ಅಧ್ಯಕ್ಷ, ಸದನ್ ದಾಸ್ ಪ್ರಧಾನ ಸಂಚಾಲಕ, ಇಬ್ರಾಹಿಂ ಬೇರಿಕೆ ಪ್ರಧಾನ ಸಂಯೋಜಕರು, ಅಶ್ರಫ್ ಕ್ಲಾಸಿಕ್, ಮುನೀರ್ ಕುಬಣೂರು, ಜೋಯ್ ವಿನ್ಸೆಂಟ್ ಡಿ. ಸೋಜ ಕಯ್ಯಾರು, ಅಶ್ರಫ್ ಪಾವೂರು, ಮಂಜುನಾಥ್ ಕಾಸರಗೋಡು, ಅನೀಶ್ ಶೆಟ್ಟಿ, ಅಮಾನುಲ್ಲಾ ಮೀಂಜ, ಅಜೀಜ್ ಸಾಗ್, ಅಶ್ರಫ್ ಪಿ.ಪಿ ಬಾಯಾರ್ ಉಪಾಧ್ಯಕ್ಷರು, ಕಾರ್ತಿಕ್ ವಾಮನ್ ರಾವ್, ಯೂಸುಫ್ ಶೇಣಿ, ಸಿದ್ದಿಕ್ ಕ್ಲಾಸಿಕ್, ಲಿತೇಶ್ ಕುಮಾರ್ ಕೆ.ಸಿ, ಆಶಿಕ್ ಮಿಯಾ, ಮಧು, ಶಾಕಿರ್ ಬಾಯಾರ್ ಸಹ ಸಂಚಾಲಕರು, ಇಬ್ರಾಹಿಂ ಬಾಜೂರಿ ಕೋಶಾಧಿಕಾರಿ, ರಾಮಚಂದ್ರ ಬೆದ್ರಡ್ಕ ಸಾಂಸ್ಕøತಿಕ ಸಮಿತಿ ಸಂಚಾಲಕ, ಮುನೀರ್ ಬೇರಿಕೆ ಹಾಗೂ ಜುಬೈರ್ ಕುಬಣೂರ್ ಅವರನ್ನು ಮಾಧ್ಯಮ ಸಂಯೋಜಕರನ್ನಾಗಿ ಆಯ್ಕೆ ಮಾಡಲಾಯಿತು.
'ದುಬೈ ಗಡಿನಾಡ ಉತ್ಸವ-2022'-ಸಮಾಲೋಚನಾ ಸಭೆ, ಮಾಧ್ಯಮ ಕೈಪಿಡಿ ಬಿಡುಗಡೆ ಸಮಾರಂಭ
0
October 10, 2022
Tags