ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿ ಹಾಗೂ ಯುವ ಸಂಘಟನೆಗಳ ನೇತೃತ್ವದಲ್ಲಿ ಅ.29ಕ್ಕೆ ಎಂಡೋಸಲ್ಪಾನ್ ಸಂತ್ರಸ್ತ ಕುಟುಂಬಗಳಿಗೆ ಸತ್ಯಸಾಯಿ ನಿರ್ಗತಿಕ ಟ್ರಸ್ಟ್ ನಿರ್ಮಿಸಿದ ಸಾಯಿ ಗ್ರಾಮದ ಮನೆಗಳ ಕಾಡು ಪೆÇದೆಗಳನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಸಾಮೂಹಿಕ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸುಮಾರು 1 ಸಾವಿರ ಜನರನ್ನು ಪಾಳ್ಗೊಳ್ಳಿಸಿ 5 ಎಕರೆ ಸ್ಥಳದಲ್ಲಿ ಸಾಮೂಹಿಕ ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯ ನಡೆಸಲಾಗುತ್ತಿದ್ದು ಪಂಚಾಯತು ವ್ಯಾಪ್ತಿಯ ಉದ್ಯೋಗ ಖಾತರಿ,ಹಸಿರು ಕ್ರಿಯಾಸೇನೆ, ಎನ್ನೆಸ್ಸಸ್,ಸ್ಕೌಟ್ ಎಂಡ್ ಗೈಡ್, ಕುಟುಂಬಶ್ರೀ,ಆರೋಗ್ಯ,ಅಂಗನವಾಡಿ ಕಾರ್ಯಕರ್ತರು ಹಾಗೂ ಸಾಮಾಜಿಕ ಸಂಘಟನೆ,ಕಾರ್ಯಕರ್ತರು ಈ ಸ್ವಚ್ಛತಾ ಕಾರ್ಯಕ್ಕೆ ನೇತೃತ್ವ ನೀಡುವರು. ಅಂದು ಬೆಳಗ್ಗೆ 9 ಗಂಟೆಗೆ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದ್ದು ಕಾರ್ಯಕ್ರಮದಲ್ಲಿ ಭಾಗವಹಿಸುವವರು ಪಂಚಾಯತು ಕಚೇರಿಗೆ ಸಮೀಪಕ್ಕೆ ತಲುಪಬೇಕೆಂದು ಸಂಬಂಧಪಟ್ಟವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅ.29ಕ್ಕೆ ಸಾಯಿಗ್ರಾಮದಲ್ಲಿ ಸಾಮೂಹಿಕ ಶ್ರಮದಾನ -ಸ್ವಚ್ಛತಾ ಕಾರ್ಯಕ್ರಮ
0
October 28, 2022
Tags