HEALTH TIPS

ಕೈತ್ತೋಡು ಶಾರದಾಂಬಾ ಭಜನಾ ಮಂದಿರದಲ್ಲಿ 35 ನೇ ವರ್ಷದ ನವರಾತ್ರಿ ಮಹೋತ್ಸವ ಸಂಪನ್ನ


       ಮುಳ್ಳೇರಿಯ: ಆದೂರು ಸಮೀಪದ ಕೈತ್ತೋಡು ಶಾರದಾಂಬಾ ಭಜನಾ ಮಂದಿರದಲ್ಲಿ 35 ನೇ ವರ್ಷದ ನವರಾತ್ರಿ ಮಹೋತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು.
          ಕಾರ್ಯಕ್ರಮದ ಪ್ರಯುಕ್ತ  ವಿಜಯ ದಶಮಿಯ ದಿನ ನಡೆದ ಸಭಾ ಕಾರ್ಯಕ್ರಮದಲ್ಲಿ ಬೃಹ್ಮಶ್ರೀ ವೇದಮೂರ್ತಿ ಕುಂಟಾರು ವಾಸುದೇವ ತಂತ್ರಿ ಆಶೀರ್ವಚನ ನೀಡಿದರು ಕಾರಡ್ಕ ಗ್ರಾಮ ಪಂಚಾಯತಿ ಅಧ್ಯಕ್ಷ ನ್ಯಾಯನಾದಿ  ಗೋಪಾಲಕೃಷ್ಣ ಕೆ, ಬಂದಡ್ಕ ಮಾಣಿಮೂಲೆ ಶಾಲಾ ಮುಖೋಪಾಧ್ಯಾಯ ಕೃಷ್ಣಪ್ಪ ಮಾಸ್ತರ್ ಅಡೂರು ಶುಭ ಹಾರೈಸಿದರು. ಶಾರದಾಂಬಾ ಸೇವಾ ಸಮಿತಿಯ ಅಧ್ಯಕ್ಷ ಎ.ಕೆ. ಚುಕ್ರ ಅಧ್ಯಕ್ಷತೆ ವಹಿಸಿದರು. ನಮಿತಿಯ ಉಪಾಧ್ಯಕ್ಷ ಬಾಬು ಪಾಂಬಾಟಿ ಉಪಸ್ಥಿತರಿದ್ದರು.  ಭಜನಾ ಮಂದಿರದ ನೂತನ ಕಟ್ಟಡದ ಧನಸಹಾಯಾರ್ಥವಾಗಿ ಹಮ್ಮಿಕೊಳ್ಳಲಾಗಿದ್ದ 1000 ರೂ. ಕೂಪನ್ ಡ್ರಾ ವನ್ನು ಬ್ರಹ್ಮಶ್ರೀ ವಾಸುದೇವ ತಂತ್ರಿ ನೆರವೇರಿಸಿದರು. ಎ ಕೆ ಸುಂದರ ಕಡೆಂಗೋಡು ಡ್ರಾ ಚೀಟಿ ಎತ್ತಿ ಮಾಹಿತಿ ನೀಡಿದರು. ಸಮಾರಂಭದಲ್ಲಿ ರವೀಂದ್ರ ರೈ ಮಲ್ಲಾವರ  ಸ್ವಾಗತಿಸಿ, ನಿರೂಪಿಸಿದರು. ಸಮಿತಿಯ ಸದಸ್ಯ ಪ್ರಸನ್ನಕುಮಾರ್ ಕಡೆಂಗೋಡು ವಂದಿಸಿದರು. ಮನೋಜ್ ಕುಮಾರ್ ಕಡೆಂಗೋಡು ಪ್ರಾರ್ಥನೆ ನಿರ್ವಹಿಸಿದರು.
      ಕಾರ್ಯಕ್ರಮದ ಪ್ರಯುಕ್ತ ಶ್ರೀ ಸನ್ನಿಧಿಯಲ್ಲಿ ಶ್ರೀನಿವಾಸ ಕುಂಜತ್ತಾಯ ಇವರ ನೇತೃತ್ವದಲ್ಲಿ ಮಹಾಪೂಜೆ, ಪುಸ್ತಕ ಪೂಜೆ ಜರಗಿತು. ಹಲವಾರು ವಿದ್ಯಾರ್ಥಿಗಳು ಪುಸ್ತಕ ಪೂಜೆಯಲ್ಲಿ ಪಾಲ್ಗೊಂಡರು. ಇದೇ ಸಂದರ್ಭದಲ್ಲಿ ಪುಟಾಣಿಗಳಿಗೆ ಅಕ್ಷರಾಭ್ಯಾಸವನ್ನು ನಡೆಸಲಾಯಿತು.
      ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ಕುಂಟಾರು ಮಹಾವಿಷ್ಣು ಕೃಪಾಪೋಶಿತ ಯಕ್ಷಗಾನ ಕಲಾ ಸಂಘದ ಕಲಾವಿದರು ಹಾಗೂ ಅತಿಥಿ ಕಲಾವಿದರ ಕೂಡುವಿಕೆಯೊಂದಿಗೆ ದೂಮ್ರಕ್ಷ ವಧೆ ಯಕ್ಷಗಾನ ತಾಳಮದ್ದಳೆ ನಡೆಯಿತು.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries