ಕಾಸರಗೋಡು: ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಪೀಡಿತ ಪಟ್ಟಿಯಲ್ಲಿರುವ ಎಲ್ಲ ಜನರಿಗೆ ತಲಾ 5 ಲಕ್ಷ ರೂ.ಗಳ ವಿತರಣೆ ಪೂರ್ಣಗೊಂಡಿದ್ದರೆ, ಪಿಂಚಣಿ ಮತ್ತು ಆರ್ಥಿಕ ಸಹಾಯವಾಗಿ 432.6 ಕೋಟಿ ರೂ. ಈ ಹಿಂದೆ ಮಂಜೂರಾದ ರೂ.119.34 ಕೋಟಿಗಳ ಜೊತೆಗೆ ರೂ.205.77 ಕೋಟಿಗಳನ್ನು ಆರ್ಥಿಕ ಸಹಾಯದ ರೂಪದಲ್ಲಿ ನೀಡಲಾಗಿದೆ.325.11 ಕೋಟಿ ರೂಪಾಯಿಗಳನ್ನು ಮಾತ್ರ ವಿತರಿಸಲಾಗಿದೆ. ಸುಪ್ರೀಂ ಕೋರ್ಟ್ ತೀರ್ಪನ್ನು ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರದ ಆದೇಶದಂತೆ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ಅವರ ನೇತೃತ್ವದಲ್ಲಿ ಈ ವರ್ಷ ಮೇ ತಿಂಗಳಿನಿಂದ ಕಾಸರಗೋಡು ಜಿಲ್ಲಾಸ್ಪತ್ರೆಯಲ್ಲಿ ನಡೆಸಿದ ಅಭಿಯಾನದ ಅಂಗವಾಗಿ 205.77 ಕೋಟಿ ರೂ. ವಿತರಿಸಲಾಗಿದೆ.
ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಬಿರ ನಡೆಸಿದ ಸಮೀಕ್ಷೆಯ ಆಧಾರದ ಮೇಲೆ, ದೀರ್ಘಕಾಲದ ಚಿಕಿತ್ಸೆಯ ಅಗತ್ಯವಿರುವವರು, ಅನಾರೋಗ್ಯದಿಂದ ಬಳಲುತ್ತಿರುವವರು ಮತ್ತು ಕೆಲಸ ಮಾಡಲು ಮತ್ತು ಮನೆಯೊಳಗೆ ಇರಲು ಸಾಧ್ಯವಾಗದ ಪೀಡಿತರ ಪಟ್ಟಿಯನ್ವಯ 5285ಮಂದಿಗೆ ಸ್ನೇಹ ಸಾಂತ್ವನ ಅನ್ವಯ 2011ರಿಂಧ 2022ರ ವರೆಗೆ 107.49ಕೋಟಿ ರೂ. ಸಾಮಾಜಿಕ ಸುರಕ್ಷಾ ಪಿಂಚಣಿ ನೀಡಲಾಗಿದೆ. ಸಂತ್ರಸ್ತ ಕುಟುಂಬಗಳ ಸಾಲ ಮನ್ನಾ ಮಾಡಲು ವಿವಿಧ ಬ್ಯಾಂಕ್ಗಳಿಗೆ 6.82 ಕೋಟಿ ರೂ. ಮೊತ್ತವನ್ನು 50000 ದಿಂದ 3 ಲಕ್ಷದವರೆಗಿನ ಸಾಲವನ್ನು ಮನ್ನಾಮಾಡುವ ನಿಟ್ಟಿನ ಆದೇಶದನ್ವಯ 1720 ವ್ಯಕ್ತಿಗಳ 2153 ಸಾಲಗಳಿಗೆ ಈ ಮೊತ್ತವನ್ನು ವಿತರಿಸಲಾಗಿದೆ.
ಎಂಡೋಸಲ್ಫಾನ್ ಸಂತ್ರಸ್ತರಿಗೆ ಪಿಂಚಣಿ, ಆರ್ಥಿಕ ನೆರವು ಸೇರಿದಂತೆ 432.6 ಕೋಟಿ ರೂ. ವಿತರಣೆ
0
October 18, 2022
Tags