ಮಂಜೇಶ್ವರ: ಮಧೂರು ಶ್ರೀಮದನಂತೇಶ್ವರ ಸಿದ್ಧಿ ವಿನಾಯಕ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯವು ಸಾಗುತ್ತಿರುವ ಹಿನ್ನೆಲೆಯಲ್ಲಿ ವರ್ಕಾಡಿ ಪಂಚಾಯತಿ ಸಮಿತಿಯನ್ನು ಶ್ರೀ ದುರ್ಗಾಪರಮೇಶ್ವರಿ ಮಂದಿರದ ವಠಾರದಲ್ಲಿ ರಚಿಸಲಾಯಿತು.
ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಯವರು ಆಶೀರ್ವಚನ ನೀಡಿದರು. ಮಧೂರು ಕ್ಷೇತ್ರವು ನಮ್ಮ ಸೀಮೆಯ ದೇವಸ್ಥಾನವಾಗಿದ್ದು ನಮ್ಮ ಕಿಂಚಿತ್ ಸೇವೆಯು ಬಹಳ ಪ್ರಾಮುಖ್ಯವಾಗಿದೆ. ಪ್ರತಿ ಭಕ್ತಾಭಿಮಾನಿಯು ಇದರ ಬಗ್ಗೆ ಗಮನಹರಿಸಿ ಕ್ಷೇತ್ರದ ಜೀರ್ಣೋದ್ಧಾರದ ಕೆಲಸದಲ್ಲಿ ಅಳಿಲ ಸೇವೆ ಮಾಡಬೇಕೆಂದು ತಿಳಿಸಿದರು.
ಸಭೆಯಲ್ಲಿ ಮಧೂರು ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷ ಡಾ. ಬಿಎಸ್ ರಾವ್ ಕಾಸರಗೋಡು, ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ, ತಾಲೂಕು ಸಮಿತಿ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಧಾರ್ಮಿಕ ಮುಂದಾಳು ಡಾ. ಶ್ರೀಧರ್ ಭಟ್ ಉಪ್ಪಳ ಹಾಗೂ ಗೋಪಾಲ ಶೆಟ್ಟಿ ನೆತ್ಯ ಅರಿಬೈಲು ಮುಂತಾದವರು ಮಾತನಾಡಿದರು. ಬಳಿಕ ಮಧೂರು ಕ್ಷೇತ್ರದ ಜೀರ್ಣೋದ್ದಾರ ಸಮಿತಿಯ ವರ್ಕಾಡಿ ಪಂಚಾಯತಿ ಘಟಕ ಸಮಿತಿಯನ್ನು ರಚಿಸಲಾಯಿತು. ರವಿ ಮುಡಿ ಮಾರ್ ಸ್ವಾಗತಿಸಿ, ಆನಂದ ತಚ್ಚಿರೆ ವಂದಿಸಿದರು.
ಮಧೂರು ಸನ್ನಿಧಿ ಜೀರ್ಣೋದ್ದಾರ: ವರ್ಕಾಡಿ ಪಂಚಾಯತಿ ಸಮಿತಿ ರೂಪೀಕರಣ ಸಭೆ
0
October 10, 2022