HEALTH TIPS

ಈ ಆಭಿಚಾರ ಹತ್ಯೆ ಕರ್ನಾಟಕದಲ್ಲಿ ನಡೆದಿದ್ದರೆ, ನವೋತ್ಥಾನ ಸಿಂಹಗಳು ಸತ್ತವರೊಳಗಿಂದ ಎದ್ದು ಬರುತ್ತಿದ್ದವು: ಸಾಂಸ್ಕøತಿಕ ವೀರರು ಈಗ ಮೂಕವಿಸ್ಮಿತರಾಗಿದ್ದಾರೆ: ಶ್ಯಾಮ್ ರಾಜ್


            ತಿರುವನಂತಪುರ: ಇಳಂತೂರಿನಲ್ಲಿ ನಡೆದ ಜೋಡಿ ಅಭಿಚಾರ ಹತ್ಯೆಯ ಬಗ್ಗೆ ಮೌನವಹಿಸುತ್ತಿರುವ ಸಾಂಸ್ಕೃತಿಕ ವೀರರನ್ನು ಯುವಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ.ಶ್ಯಾಮ್ ರಾಜ್ ತೀವ್ರವಾಗಿ ಟೀಕಿಸಿದ್ದಾರೆ.
          ನಾವು ನಂಬುತ್ತಿರುವ ಎಲ್ಲಾ ನವೋದಯ ದೃಷ್ಟಿಕೋನಗಳು ಮತ್ತು ಪ್ರಗತಿಪರ ಚಿಂತನೆಗಳು ಎಡಪಂಥೀಯರ ಪೋಸ್ಟರ್‍ಗೆ ಸೀಮಿತವಾಗಿವೆ. ಕರ್ನಾಟಕದಲ್ಲಿ ಈ ಘಟನೆ  ನಡೆದಿದ್ದರೆ ಪುನರುತ್ಥಾನದ ಸಿಂಹಗಳು ಗುಲ್ಲೆಬ್ಬಿಸುತ್ತಿದ್ದವು ಎಂದು ಶ್ಯಾಮ್ ರಾಜ್ ಹೇಳಿರುವÀರು. ಫೇಸ್ ಬುಕ್ ಮೂಲಕ ಅವರು ಪ್ರತಿಕ್ರಿಯಿಸಿದ್ದಾರೆ.
          ಪುನರುತ್ಥಾನ, ನವೋತ್ಥಾನ  ಎನ್ನುವುದು ಸಿಪಿಎಂ ಪೋಸ್ಟರ್‍ಗಳಿಗೆ ಅಂಟಿಸುವ ಪದವಲ್ಲ ಎಂದು ಅವರ ಫೇಸ್‍ಬುಕ್ ಪೋಸ್ಟ್ ಹೇಳುತ್ತಿದೆ. ಪತ್ತನಂತಿಟ್ಟದಿಂದ ಆಭಿಚಾರ ಘಟನೆಯ ಸುದ್ದಿ ಮಲಯಾಳಿಗಳ ಮನಸ್ಸನ್ನು ಭಯಭೀತಗೊಳಿಸುತ್ತದೆ. ಅಕ್ಷರಶಃ ಕೇರಳವನ್ನು ನಾಚಿಸುವಂತಿದೆ. ನಿಜ ಹೇಳಬೇಕೆಂದರೆ ನಾವು ಬಿಂಬಿಸುವ ಈ ಎಲ್ಲಾ ಪ್ರಗತಿಪರ ವಿಚಾರಗಳನ್ನು ಮತ್ತು ನವೋದಯ ದೃಷ್ಟಿಕೋನಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಅವೆಲ್ಲವೂ ಕೇರಳದಲ್ಲಿ ಎಡಪಕ್ಷಗಳ ಪೋಸ್ಟರ್ ಘೋಷಣೆಗಳμÉ್ಟೀ ಆಗಿದೆ ಎಂದಿರುವರು.
          ಎಡಪಂಥೀಯ ರಾಜಕಾರಣದಿಂದ ಕೇರಳದ ಬೌದ್ಧಿಕ (ತಥಾಕಥಿತ) ಸಮಾಜಕ್ಕೆ ಪೆಟ್ಟು ಬಿದ್ದಿದೆಯೇ?ಈಗ ನಡೆಯುತ್ತಿರುವುದು ಪಕ್ಕದ ಕರ್ನಾಟಕದಲ್ಲಿ ಆಗಿದ್ದರೆ? ಇಲ್ಲಿರುವ ಪ್ರಗತಿಪರ ನವೋದಯ ಸಿಂಹಗಳು ಸತ್ತವರೊಳಗಿಂದ ಎದ್ದು ಬರುತ್ತವೆ. ಕಠೋರವಾಗಿ ಉಪದೇಶ ಮಾಡುತ್ತಿದ್ದರು. ಕೇರಳದ ಸಾಂಸ್ಕೃತಿಕ ನಾಯಕರು ಮತ್ತು ಬುದ್ಧಿಜೀವಿಗಳ ಹೇಳಿಕೆಗಳನ್ನು ನೀವು ನೋಡಿದ್ದೀರಾ? ಇಲ್ಲ, ಏಕೆಂದರೆ ಆರೋಪಿ ಸಿಪಿಎಂ ನಾಯಕ. ಆಚಾರ-ವಿಚಾರ, ಮೂಢನಂಬಿಕೆಗಳ ವಿರುದ್ಧ ನಾವು ಒಟ್ಟಾಗಿ ನಿಜವಾದ ಪ್ರಗತಿಪರ ಸಮಾಜವನ್ನು ಕಟ್ಟಬಹುದು, ಎಡಪಂಥೀಯ ಸಾರ್ವಜನಿಕ ಪ್ರಜ್ಞೆಯಲ್ಲಿ ನಿರ್ಮಾಣವಾದ ಸುಳ್ಳು ಪ್ರಗತಿಪರ ಚಿಂತನೆಗಳಲ್ಲ ಎಂದು ಹೇಳುವ ಮೂಲಕ ಪೋಸ್ಟ್ ಕೊನೆಗೊಳ್ಳುತ್ತದೆ.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries