HEALTH TIPS

ಆಭಿಚಾರಕ್ಕಾಗಿ ಅವಳಿ ಹತ್ಯೆಯ ಮಾಸ್ಟರ್ ಮೈಂಡ್ ರಶೀದ್ ಅಲಿಯಾಸ್ ಮುಹಮ್ಮದ್ ಶಾಫಿ: ‘ಶ್ರೀದೇವಿ’ಯಾಗಿ ವಂಚನೆ: ಮಾಂತ್ರಿಕನಾಗಿ ಮುನ್ನಡೆಸಿದ್ದು ಹಲವು ಪಾತ್ರಗಳು


         ತಿರುವನಂತಪುರ: ಪತ್ತನಂತಿಟ್ಟದಲ್ಲಿ ನಡೆದ ವಾಮಾಚಾರ ಅವಳಿ ಕೊಲೆ ಸುದ್ದಿಯಿಂದ ಕೇರಳ ಸಮುದಾಯ ಬೆಚ್ಚಿಬಿದ್ದಿದೆ. ಅವಳಿ ಕೊಲೆಗಳ ಹೆಚ್ಚಿನ ವಿವರಗಳು ಹೊರಬರುತ್ತಿವೆ.
          ಕೊಲೆ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದೆ. ದಂಪತಿ ಭಗವಾಲ್ ಸಿಂಗ್ ಮತ್ತು ಅವರ ಪತ್ನಿ ಲೈಲಾ ಮತ್ತು ಅವರಿಗೆ ಅಭಿಚಾರ ನಡೆಸಲು ನೇತೃತ್ವ ವಹಿಸಿದ ಮಾಂತ್ರಿಕನನ್ನು ಬಂಧಿಸಲಾಗಿದೆ . ಮಹಿಳೆಯರನ್ನು ವಶೀಕರಿಸಿ  ಪತ್ತನಂತಿಟ್ಟಕ್ಕೆ ಕರೆತಂದ ಕಡವಂತ್ರ ಮೂಲದ ಮೊಹಮ್ಮದ್ ಶಾಫಿ ಎಂಬಾತನೇ ಮಾಂತ್ರಿಕನಾಗಿ ದಂಪತಿಯ ಮುಂದೆ ಬಂದ ರಶೀದ್. ಪೋಲೀಸರ ಪ್ರಕಾರ, ಈತನೇ ಶ್ರೀದೇವಿ ಹೆಸರಿನಲ್ಲಿ ನಕಲಿ ಪ್ರೊಫೈಲ್ ಸೃಷ್ಟಿಸಿ ಸಿಪಿಎಂ ಇಳಂತೂರ್ ಬ್ರಾಂಚ್ ಕಮಿಟಿ ಸದಸ್ಯ ಭಗವಾಲ್ ಸಿಂಗ್ ಅವರನ್ನು ಸಂಪರ್ಕಿಸಿದ್ದ.
      ಶಾಫಿ ಎಂಬ ಮಾಂತ್ರಿಕನಿದ್ದಾನೆ, ಅವನ ಮೂಲಕ ಸಮೃದ್ಧಿ ಮತ್ತು ಸಂಪತ್ತು ಪಡೆಯಬಹುದು ಎಂದು ಹೇಳಿದನು 'ಶ್ರೀದೇವಿ'. ಶಾಫಿ ತನ್ನ ನಕಲಿ ಫೇಸ್‍ಬುಕ್ ಪ್ರೊಫೈಲ್ ಮೂಲಕ ಭಗವಾಲ್ ಸಿಂಗ್ ಅವರನ್ನು ಸಂಪರ್ಕಿಸಿದ್ದ. ನಂತರ ತಿರುವಲ್ಲಾದಲ್ಲಿರುವ ತಮ್ಮ ಮನೆಯಲ್ಲಿ ವಾಮಾಚಾರ ಮಾಡಲು ಪ್ರಾರಂಭಿಸಿದ.
          ಲೈಂಗಿಕ ಕಾರ್ಯಕರ್ತೆಯರಾದ ಮಹಿಳೆಯರನ್ನು ಸ್ವತಃ ಶಾಫಿಯೇ ಸಂಪರ್ಕಿಸಿದ್ದ. ಅಶ್ಲೀಲ ಚಿತ್ರದಲ್ಲಿ ನಟಿಸಿದರೆ ಹತ್ತು ಲಕ್ಷ ರೂಪಾಯಿ ಕೊಡುವುದಾಗಿ ಶಾಫಿ ಭರವಸೆ ನೀಡಿದ್ದ. ಲಾಟರಿ ಮಾರಾಟಗಾರರಾದ ಪದ್ಮಾ ಮತ್ತು ರೋಸ್ಲಿ ಕೊನೆಗೂ ಬಲೆಗೆ ಸಿಕ್ಕಿಬಿದ್ದರು. ಅವರನ್ನು ಪತ್ತನಂತಿಟ್ಟಕ್ಕೆ ಕರೆತಂದು 24 ಗಂಟೆಗಳಲ್ಲಿ ಕೊಲ್ಲಲಾಯಿತು.
        ಸದ್ಯ ಪೋಲೀಸರಿಗೆ ಪದ್ಮಾ ಅವರ ಶವ ಪತ್ತೆಯಾಗಿದೆ. ಪೋಲೀಸರು ಶಾಫಿ ಮತ್ತು ದಂಪತಿಯನ್ನು ಕೊಲೆ ನಡೆದ ಸ್ಥಳಕ್ಕೆ ಕರೆದೊಯ್ದು ಸಾಕ್ಷ್ಯ ಪಡೆದರು.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries