ತಿರುವನಂತಪುರ: ಪತ್ತನಂತಿಟ್ಟದ ಎಳಂತೂರಿನಲ್ಲಿ ನಡೆದಿರುವ ಕೊಲೆಗೆ ಕಾಂಗ್ರೆಸ್ ಮುಖಂಡ ರಮೇಶ್ ಚೆನ್ನಿತ್ತಲ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ.
ಕೇರಳದಲ್ಲಿ ಇಂತಹ ಘಟನೆ ವರದಿಯಾಗಿರುವುದು ಅತ್ಯಂತ ಗಂಭೀರ ಘಟನೆಯಾಗಿದ್ದು, ಇದನ್ನು ನಂಬಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಪೋಲೀಸರು ತನಿಖೆಯಲ್ಲಿ ವಿಫಲರಾಗಿದ್ದಾರೆ ಎಂದು ಚೆನ್ನಿತ್ತಲ ಟೀಕಿಸಿದರು.
ಮೊದಲ ವ್ಯಕ್ತಿ ನಾಪತ್ತೆಯಾದಾಗಲೇ ತನಿಖೆ ಆರಂಭವಾಗಬೇಕಿತ್ತು, ಆದರೆ ಆಗಿಲ್ಲ ಎಂಬುದು ಬೆಳವಣಿಗೆಯಿಂದ ಗೊತ್ತಾಗುತ್ತದೆ ಎಂದರು. ಮೊದಲ ನಾಪತ್ತೆ ಪ್ರಕರಣದ ತನಿಖೆ ನಡೆಸದೆ ಇದೀಗ ನಡೆಸುವ ಈ ತನಿಖೆ ಗುರಿ ತಲಪೀತೇ ಎಮದು ಕೇಳಿರುವರು. ಇಂತಹ ಇನ್ನಷ್ಟು ಕೊಲೆಗಳು ನಡೆದಿರುವ ಬಗ್ಗೆ ತನಿಖೆ ನಡೆಸಲು ಹಿರಿಯ ಅಧಿಕಾರಿಯ ನೇತೃತ್ವದಲ್ಲಿ ವಿಶೇಷ ತಂಡವನ್ನು ಕೂಡಲೇ ನಿಯೋಜಿಸಬೇಕು ಎಂದು ಒತ್ತಾಯಿಸಿದರು.
ಆಗಸ್ಟ್ 17 ರಂದು ಕೊಲೆಯಾದ ಮಹಿಳೆ ಕಾಣೆಯಾಗಿದ್ದಾರೆ ಎಂದು ಕಾಲಡಿ ಪೋಲೀಸರಿಗೆ ದೂರು ಬಂದಿತ್ತು. ಆದರೆ ಪ್ರಕರಣದಲ್ಲಿ ಹೆಚ್ಚಿನ ತನಿಖೆಗಳು ನಡೆದಿಲ್ಲ. ನಂತರ ಸೆ.26ರಂದು ಎರಡನೇ ಮಹಿಳೆ ಕಾಣೆಯಾಗಿದ್ದಾರೆ ಎಂದು ಕಡವಂತರ ಠಾಣೆ ಪೋಲೀಸರಿಗೆ ದೂರು ಬಂದಾಗ ತನಿಖೆ ಆರಂಭಿಸಿದ್ದರು. ಈ ವಿಚಾರದಲ್ಲಿ ಪೋಲೀಸರಿಂದ ಗಂಭೀರ ವೈಫಲ್ಯವಾಗಿದೆ ಎಂದು ರಮೇಶ್ ಚೆನ್ನಿತ್ತಲ ಹೇಳಿದರು. ಒಬ್ಬ ಆರೋಪಿಯ ರಾಜಕೀಯ ಹಿನ್ನೆಲೆ ಗಂಭೀರವಾಗಿದೆ. ಆದ್ದರಿಂದ ರಾಜಕೀಯ ಹಸ್ತಕ್ಷೇಪವಿಲ್ಲದೆ ನ್ಯಾಯಯುತ ತನಿಖೆ ನಡೆಸಬೇಕು ಎಂದು ಚೆನ್ನಿತ್ತಲ ಆಗ್ರಹಿಸಿದರು.
ಅವಳಿ ಕೊಲೆ; ಪೋಲೀಸರ ವಿರುದ್ಧ ತೀವ್ರ ಟೀಕೆ; ರಾಜಕೀಯ ಹಸ್ತಕ್ಷೇಪವಿಲ್ಲದೆ ತನಿಖೆ ನಡೆಸಬೇಕು; ರಮೇಶ್ ಚೆನ್ನಿತ್ತಲ
0
October 11, 2022