ಕಾಸರಗೋಡು: ರಾಜ್ಯ ಹುರಿಹಗ್ಗ ಅಭಿವೃದ್ಧಿ ಇಲಾಖೆ ಮತ್ತು ಕಣ್ಣೂರು ಹುರಿಹಗ್ಗ ಪ್ರಾಜೆಕ್ಟ್ ಕಛೇರಿಯು ಗ್ರಾಮ/ಬ್ಲಾಕ್ ಪಂಚಾಯತ್ ಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಹುರಿಹಗ್ಗ ಭೂಮಿ ಬಳಕೆ ಜಾಗೃತಿ ಕಾರ್ಯಾಗಾರವನ್ನು ನಡೆಸಿತು.
ಪರಪ್ಪ ಬ್ಲಾಕ್ ನಲ್ಲಿ ನಡೆದ ಕಾರ್ಯಾಗಾರವನ್ನು ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಎಂ.ಲಕ್ಷ್ಮಿ ಉದ್ಘಾಟಿಸಿದರು. ಪರಪ ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷ ಕೆ.ಭೂಪೇಶ್ ಅಧ್ಯಕ್ಷತೆ ವಹಿಸಿದ್ದರು. ಕ್ವಾರ್ ಫೆಡ್ ಪ್ರತಿನಿಧಿ ಸನೂಪ್ ಅವರು ಹುರಿಹಗ್ಗದಿಂದ ನೆಲದ ಹೊದಿಕೆಯ ಬಳಕೆ ಮತ್ತು ಸಾಮಥ್ರ್ಯದ ಬಗ್ಗೆ ತರಗತಿ ನಡೆಸಿದರು. ಬ್ಲಾಕ್ ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಆಡಳಿತ ಸಮಿತಿ ಸದಸ್ಯರು, ಕಾರ್ಯದರ್ಶಿಗಳು ಹಾಗೂ ಉದ್ಯೋಗ ಸಹಾಯಕ ಅಭಿಯಂತರರು ಭಾಗವಹಿಸಿದ್ದರು. ಕಣ್ಣೂರು ಹುರಿಹಗ್ಗ ಕಾರ್ಯಾಲಯದ ಯೋಜನಾಧಿಕಾರಿ ಕೆ.ರಾಧಾಕೃಷ್ಣನ್ ಸ್ವಾಗತಿಸಿ, ಬ್ಲಾಕ್ ಬಿಡಿಒ ಪಿ.ಕೆ.ಸುಮೇಶ್ ಕುಮಾರ್ ವಂದಿಸಿದರು.
ಹುರಿಹಗ್ಗ ಭೂವಸ್ತ್ರ ತಯಾರಿ ಕಾರ್ಯಾಗಾರ
0
October 19, 2022