ಕಾಸರಗೋಡು: ವಾರ್ತಾ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾಸರಗೋಡು ಜಿಲ್ಲಾ ವಾರ್ತಾ ಅಧಿಕಾರಿ ಕಚೇರಿ, ಅನೌಪಚಾರಿಕ ಶಿಕ್ಷಣ ಸಮಿತಿ ಕಾನ್ಫೆಡ್ ಮತ್ತು ನೀಲೇಶ್ವರಂ ಮಹಾತ್ಮ ಬಿ.ಎಡ್ ಕಾಲೇಜಿನ ಜಂಟಿ ಆಶ್ರಯದಲ್ಲಿ ಮಾದಕ ದ್ರವ್ಯ ಮುಕ್ತ ಜಾಗೃತಿ ವಿಚಾರ ಸಂಕಿರಣ ಅ.19 ರಂದು ಬೆಳಿಗ್ಗೆ 11.30 ಕ್ಕೆ ನೀಲೇಶ್ವರಂ ಮಹಾತ್ಮ ಬಿ.ಎಡ್ ಕಾಲೇಜಿನಲ್ಲಿ ಆಯೋಜಿಸಲಾಗಿದೆ.
ಕಣ್ಣೂರು ವಿಶ್ವವಿದ್ಯಾನಿಲಯದ ಮಾಜಿ ಪರೀಕ್ಷಾ ನಿಯಂತ್ರಕರು ಹಾಗೂ ನೀಲೇಶ್ವರಂ ನಗರ ಸಭೆಯ ಮಾಜಿ ಅಧ್ಯಕ್ಷ ಪೆÇ್ರ. ಕೆ. ಪಿ ಜಯರಾಜನ್ ಉದ್ಘಾಟಿಸುವರು. ಕಾಲೇಜು ಪ್ರಾಂಶುಪಾಲ ಡಾ. ಎಂ. ವಿ. ವಿಜಯಕುಮಾರ್ ಅಧ್ಯಕ್ಷತೆ ವಹಿಸುವರು. ನಿವೃತ್ತ ಉಪಜಿಲ್ಲಾ ಶೀಕ್ಷಣಾಧಿಕಾರಿ ಕೆ. ವಿ. ರಾಘವನ್ ಮಾದಕ ವಸ್ತು ವಿರೋಧಿ ತರಗತಿ ನಡೆಸಿ ಕೊಡಲಿರುವರು. ವಿಶೇಷ ಆಹ್ವಾನಿತರಾಗಿ ಡಾ. ಪಿ. ಸಿ. ಬಾಲಕೃಷ್ಣನ್ ಪಾಲ್ಗೊಳ್ಳುವರು. ಡಾ. ಕೆ. ಕೆ. ಷಣ್ಮುಖದಾಸ್, ಎಂ. ಪಿ. ಸುಬ್ರಮಣಿಯನ್, ಕಾವುಂಗಾಲ್ ನಾರಾಯಣನ್, ಇ. ರಾಘವನ್, ಕೆ. ವಿ. ಕೃಷ್ಣನ್ ಪಾಲ್ಗೊಳ್ಳುವರು. ಜಿಲ್ಲಾ ವಾರ್ತಾಧಿಕಾರಿ ಎಂ.ಮಧುಸೂದನನ್ ಮಾದಕ ವಸ್ತು ವಿರೋಧಿ ಸಂದೇಶ ನೀಡುವರು.
ಇಂದು ಮಾದಕ ವಸ್ತು ವಿರೋಧಿ ಜಾಗೃತಿ ವಿಚಾರ ಸಂಕಿರಣ
0
October 18, 2022
Tags