ಉಪ್ಪಳ : ಜ್ಞಾನದ ಬೆಳಕು ಎಲ್ಲೆಡೆ ಪಸರಿಸಲಿ. ತನ್ಮೂಲಕ ಸಮಾಜದಲ್ಲಿ ಶಾಂತಿ, ಸೌಹಾರ್ಧ, ಸಹಬಾಳ್ವೆ ಎಲ್ಲೆಡೆ ಕಂಗೊಳಿಸಲಿ. ಭಾರತೀಯ ಹಬ್ಬಗಳು ಸಂಸ್ಕøತಿಯ ಪ್ರತೀಕವಾಗಿದ್ದು ಅದನ್ನು ಕಾಪಿಡುವಲ್ಲಿ ವಿದ್ಯಾರ್ಥಿಗಳೂ ಶಿಕ್ಷಕರು ಹಾಗೂ ಸಮಾಜದ ಪಾತ್ರ ಮಹತ್ವದ್ದಾಗಿದೆ ಎಂದು ಸಾಹಿತಿ, ಕವಿಯಿತ್ರಿ ಜಯಲಕ್ಷ್ಮಿ ಹೊಳ್ಳ ಉಪ್ಪಳ ಹೇಳಿದರು.
ಜಯಲಕ್ಷ್ಮಿ ಹೊಳ್ಳ ಅವರು ಇತ್ತೀಚೆಗೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಳಿಂಜ ವಿದ್ಯಾ ಸಂಸ್ಥೆಯಲ್ಲಿ ನಡೆಸಿದ ದೀಪಾವಳಿ ಹಬ್ಬ ಆಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾರಂಭದಲ್ಲಿ ಬಿ.ಆರ್.ಸಿ. ಯ ಬಿ.ಪಿ.ಸಿ ವಿಜಯಕುಮಾರ ಪಾವಳ ಮತ್ತು ಸಿಆರ್.ಸಿ ಕೋರ್ಡಿನೇಟರ್ ತಿಲಕ, ಹಿರಿಯ ಶಿಕ್ಷಕಿ ಅನಿತಕುಮಾರಿ ಉಪಸ್ಥಿತರಿದ್ದರು. ಶಿಕ್ಷಕಿ ರೇವತಿ ಶುಭ ಹಾರೈಸಿದರು. ಶಾಲಾ ಮುಖ್ಯ ಶಿಕ್ಷಕಿ ಚಿತ್ರಾವತಿ ರಾವ್ ಚಿಗುರುಪಾದೆ ಸ್ವಾಗತಿಸಿ, ಅಬ್ದುಲ್ ಬಶೀರ್ ನಿರ್ವಹಿಸಿದರು. ರಿಯಾಸ್ ಯಂ.ಯಸ್ ವಂದಿಸಿದರು.
ಶಿಕ್ಷಕಿ ಅಬ್ಸ ಅವರ ನೇತೃತ್ವದಲ್ಲಿ ದೀಪಾವಳಿ ನಿಮಿತ್ತ ಗೂಡು ದೀಪ ತಯಾರಿಕಾ ಪ್ರಾತ್ಯಕ್ಷಿಕೆಯನ್ನು ವಿದ್ಯಾರ್ಥಿಗಳ ಮೂಲಕ ಮಾಡಲಾಯಿತು. ಬಳಿಕ ಹಾಡು ಹೇಳಿ, ಸಿಹಿತಿಂಡಿಯೊಂದಿಗೆ ವಿದ್ಯಾರ್ಥಿಗಳು ಸಂಭ್ರಮಿಸಿದರು.
ಜ್ಞಾನದ ಬೆಳಕು ಎಲ್ಲೆಡೆ ಪಸರಿಸಲಿ: ಜಯಲಕ್ಷ್ಯಿ ಹೊಳ್ಳ
0
October 28, 2022
Tags