HEALTH TIPS

ರಾಜ್ಯಪಾಲರ ನಿರ್ಧಾರಗಳನ್ನು ಮುಖ್ಯಮಂತ್ರಿಯೇ ನಿರ್ದೇಶಿಸಬೇಕು! ರಾಜ್ಯಪಾಲರ ವಿವೇಚನೆ ತೀರಾ ಸಂಕುಚಿತ: ಪಿಣರಾಯಿ ವಿಜಯನ್


          ತಿರುವನಂತಪುರ: ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಅವರಿಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಟುಶಬ್ದಗಳ ಉತ್ತರ ನೀಡಿದ್ದಾರೆ.
           ವಿವಾದಾತ್ಮಕ ವಿದೇಶ ಪ್ರವಾಸದ ಬಗ್ಗೆ ವಿವರಿಸಲು ಸುದ್ದಿಗೋಷ್ಠಿ ನಡೆಸಿದ ಮುಖ್ಯಮಂತ್ರಿಗಳು ಮಾಧ್ಯಮಗಳಿಗೆ ಈ ಹಿಂದೆಯೇ ಸಿದ್ಧಪಡಿಸಿದ್ದ ಉತ್ತರದಂತೆ ತಮ್ಮ ನಿಲುವನ್ನು ವಿವರಿಸಿದರು. ರಾಜ್ಯಪಾಲರು ಹೇಳಿದ್ದು ಸಿಂಧುವಲ್ಲ, ಸಿಂಧುವಾಗುವುದಿಲ್ಲ ಎಂದು ಸೂಚಿಸಿದ ಮುಖ್ಯಮಂತ್ರಿ, ರಾಜ್ಯಪಾಲರು ಅದನ್ನು ತಾನಾಗಿಯೇ ಸರಿಪಡಿಸುತ್ತಾರೆ ಎಂಬ ನಂಬಿಕೆ ಇದೆ ಎಂದು ಹೇಳಿದರು.
          ಯಾರೂ ಯಾರನ್ನೂ ಟೀಕಿಸಬಾರದು ಎಂಬ ನಿಲುವು ತಳೆಯುವುದು ಸರಿಯಲ್ಲ ಎಂದು ಮುಖ್ಯಮಂತ್ರಿ ಪ್ರತಿಕ್ರಿಯಿಸಿದರು. ನಮ್ಮ ಸಂವಿಧಾನವು ಟೀಕೆ, ಸ್ವವಿಮರ್ಶೆ ಮತ್ತು ಅಭಿಪ್ರಾಯ ವ್ಯಕ್ತಪಡಿಸಲು ಸ್ವಾತಂತ್ರ್ಯವನ್ನು ನೀಡಿದೆ. ನಮ್ಮ ದೇಶವು ಫೆಡರಲ್ ತತ್ವಗಳನ್ನು ಅನುಸರಿಸುತ್ತದೆ. ಇಲ್ಲಿ ಸಂಸದೀಯ ಪ್ರಜಾಪ್ರಭುತ್ವವಿದೆ. ಈ ವ್ಯವಸ್ಥೆಯು ರಾಜ್ಯಪಾಲರ ಹುದ್ದೆಯ ಕರ್ತವ್ಯಗಳು ಮತ್ತು ಜವಾಬ್ದಾರಿಗಳನ್ನು ನಿಗದಿಪಡಿಸುತ್ತದೆ. ಅಂತೆಯೇ, ಸಂವಿಧಾನವು ಮಂತ್ರಿಗಳ ಕರ್ತವ್ಯಗಳನ್ನು ಸಹ ನಿರ್ದಿಷ್ಟಪಡಿಸುತ್ತದೆ. ನ್ಯಾಯಾಲಯದ ತೀರ್ಪಿನ ಮೂಲಕ ಅವೆಲ್ಲವನ್ನೂ ನಂತರ ಸ್ಪಷ್ಟಪಡಿಸಲಾಗಿದೆ ಎಂದು ಪಿಣರಾಯಿ ವಿಜಯನ್ ತಿಳಿಸಿದರು.
        ಚುನಾಯಿತ ಸಚಿವ ಸಂಪುಟದ ಸಲಹೆ ಮತ್ತು ನೆರವಿನೊಂದಿಗೆ ಕಾರ್ಯನಿರ್ವಹಿಸುವುದು ರಾಜ್ಯಪಾಲರ ಸಾಮಾನ್ಯ ಜವಾಬ್ದಾರಿಯಾಗಿದೆ. ರಾಜ್ಯಪಾಲರ ವಿವೇಚನಾ ಅಧಿಕಾರ ಅತ್ಯಂತ ಕಿರಿದಾಗಿದೆ ಎಂದು ಡಾ. ಅಂಬೇಡ್ಕರ್ ಅವರೇ ಹೇಳಿದ್ದಾರೆ. ಮಂತ್ರಿಗಳನ್ನು ಮುಖ್ಯಮಂತ್ರಿ ನೇಮಿಸುತ್ತಾರೆ. ಮಂತ್ರಿಗಳು ತಮ್ಮ ರಾಜೀನಾಮೆಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಬೇಕು. ಅದನ್ನು ಮುಖ್ಯಮಂತ್ರಿಗಳೇ ರಾಜ್ಯಪಾಲರಿಗೆ ರವಾನಿಸುತ್ತಾರೆ. ಮುಖ್ಯಮಂತ್ರಿಗಳ ಸೂಚನೆಯಂತೆ ರಾಜ್ಯಪಾಲರು ನಿರ್ಧಾರ ಕೈಗೊಳ್ಳಬೇಕು, ಇದೆಲ್ಲ ಸಂವಿಧಾನದಲ್ಲಿದೆ ಎಂದು ಪಿಣರಾಯಿ ವಿಜಯನ್ ಉತ್ತರಿಸಿದರು.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries