ಮಧೂರು:ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಮೂಲಸ್ಥಾನ ಉಳಿಯತ್ತಡ್ಕದಲ್ಲಿ ಮದರು ಮಂಟಪ, ಶ್ರೀ ದೇವರ ಸವಾರಿಕಟ್ಟೆ, ಶ್ರೀ ಪಂಜುರ್ಲಿ ದೈವದ ಗುಡಿ ನಿರ್ಮಾಣ ಕಾಮಗಾರಿಗೆ ಗುರುವಾರ ಶಿಲಾನ್ಯಾಸ ನಡೆಸಲಾಯಿತು.
ಮಧೂರು ದೇವಸ್ಥಾನ ಜೀರ್ಣೋದ್ಧಾರ ಸಮಿತಿ ನೇತೃತ್ವದಲ್ಲಿ ಸಮಾರಂಭ ಆಯೋಜಿಸಲಾಗಿತ್ತು. ಮಾಯಿಪ್ಪಾಡಿ ಅರಸು ದಾನ ಮಾರ್ತಾಂಡ ವರ್ಮ ಯಾನೆ ರಾಮಂತರಸುಗಳ ನೇತೃತ್ವದಲ್ಲಿ ಶಿಲಾನ್ಯಾಸ ಸಮಾರಂಭ ನಡೆಯಿತು. ವಕೀಲ ರಾಜೇಂದ್ರ ರಾವ್, ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಜಯದೇವ ಖಂಡಿಗೆ, ದೇವಸ್ಥಾನದ ಪವಿತ್ರಪಾಣಿ ರತನ್ ಕುಮಾರ್ ಕಾಮಡ, ರಾಮ ಪಟ್ಟಾಜೆ, ಗೋಪಾಲಕೃಷ್ಣ, ಮುರಳಿ ಗಟ್ಟಿ, ಸುಕುಮಾರ ಕುದ್ರೆಪ್ಪಾಡಿ, ವಸಂತ ಅಜಕ್ಕೋಡು, ಆನಂದ ಕೆ ಮವ್ವಾರ್, ಡಿ ಶಂಕರ, ರಾಧಾಕೃಷ್ಣ ಉಳಿಯತ್ತಡ್ಕ, ರಾಮಪ್ಪ ಮಂಜೇಶ್ವರ, ಡಿ. ಗೋಪಾಲ, ಜಯಾ ರಾಮಪ್ಪ, ಡಿ ಕೃಷ್ಣ, ಸುನಂದಾ ಟೀಚರ್, ಕೃಷ್ಣ ದಾಸ್, ಸುರೇಶ್ ಅಜಕ್ಕೋಡು, ನಿಟ್ಟೋಣಿ ಬಂದ್ಯೋಡು, ಹರಿಶ್ಚಂದ್ರ ಪುತ್ತಿಗೆ ಉಪಸ್ಥಿತರಿದ್ದರು.
ಮಧೂರು ಮೂಲಸ್ಥಾನದಲ್ಲಿ ಮದರು ಮಂಟಪ, ಶ್ರೀ ದೇವರ ಸವಾರಿಕಟ್ಟೆ, ಶ್ರೀ ಪಂಜುರ್ಲಿ ದೈವದ ಗುಡಿ ನಿರ್ಮಾಣಕ್ಕೆ ಶಿಲಾನ್ಯಾಸ
0
October 10, 2022
Tags