ಮಂಜೇಶ್ವರ: ಕುಂಜತ್ತೂರು ಜಿ.ವಿಎಚ್.ಎಸ್.ಎಸ್ ಶಾಲೆಯ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಿಕ್ಷಕ-ರಕ್ಷಕ ಸಂಘದ ಮಹಾಸಭೆ ಶಾಲಾ ಸಭಾಂಗಣದಲ್ಲಿ ಇತ್ತೀಚೆಗೆ ಜರುಗಿತು. ಶಾಲಾ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಯೋಗಿಶ.ಕೆ. ಅಧ್ಯಕ್ಷತೆ ವಹಿಸಿದ್ದರು.
ಈ ಸಂಧರ್ಭದಲ್ಲಿ ರಕ್ಷಕರಿಗಾಗಿ ಮಾದಕದ್ರವ್ಯ ವಿರೋಧಿ ಜನಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಶಿಕ್ಷಕಿ ಅನಿತಾ ನಡೆಸಿಕೊಟ್ಟರು.ಶಾಲಾ ಕಾರ್ಯ ಚಟುವಟಿಕೆಗಳ ವರದಿಯನ್ನು ಶಿಕ್ಷಕಿ ಸುಚೇತಾ, ಶಿಕ್ಷಕ ಶ್ರೀ ಅಶ್ರಫ್,ವಿ.ಎಚ್.ಎಸ್.ಸಿ.ಪ್ರಾಚಾರ್ಯ ಶಿಶುಪಾಲ ಮಂಡಿಸಿದರು. ಲೆಕ್ಕಪತ್ರ ವನ್ನು ಶಾಲಾ ಮುಖ್ಯೋಪಾಧ್ಯಾಯ ಬಾಲಕೃಷ್ಣ. ಜಿ ಹಾಗೂ ವಿ.ಎಚ್.ಎಸ್. ಸಿ. ವಿಭಾಗದ ಲೆಕ್ಕಪತ್ರವನ್ನು ಶಿಕ್ಷಕ ಕಿಶೋರ್ ಕುಮಾರ್ ಮಂಡಿಸಿದರು.ಸಭೆಯ ಒಪ್ಪಿಗೆ ಯೊಂದಿಗೆ ಲೆಕ್ಕಪತ್ರವನ್ನು ಅಂಗೀಕರಿಸಲಾಯಿತು. ಬಳಿಕ ಶಿಕ್ಷಕ-ರಕ್ಷಕ ಸಂಘದ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ನೂತನ ಸಮಿತಿ ಅಧ್ಯಕ್ಷರಾಗಿ ಮೋಹಿನಿ, ಉಪಾಧ್ಯಕ್ಷರಾಗಿ ಮುಮ್ತಾಜ್ ಇವರನ್ನು ಆರಿಸಲಾಯಿತು.ಶಾಲಾ ಬಾಲಕೃಷ್ಣ. ಜಿ.ಸ್ವಾಗತಿಸಿ.ಶಿಕ್ಷಕಿ ಅಮಿತಾ ವಂದಿಸಿದರು. ಎಸ್.ಎಂ.ಸಿ.ಸದಸ್ಯರಾದ ಶ್ರೀ ಯು.ಎಚ್.ಅಬ್ದುಲ್ ರಹಮಾನ್, ನಿವೃತ್ತ ಶಿಕ್ಷಕ ಈಶ್ವರ ಶುಭ ಹಾರೈಸಿದರು.
ಕುಂಜತ್ತೂರು ಶಾಲೆಯಲ್ಲಿ ಶಿಕ್ಷಕ-ರಕ್ಷಕಸಂಘದ ಮಹಾಸಭೆ
0
October 11, 2022