ಕಾಸರಗೋಡು: 'ಡಾ. ರಮಾನಂದ ಬನಾರಿ-82'ಅನ್ವಯ ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ವತಿಯಿಂದ ಕಥಾ ಗೋಷ್ಠಿ ಅ. 16ರಂದು ಮಧ್ಯಹ್ನ 3ಕ್ಕೆ ಮಧೂರು ಸನಿಹದ ಪರಕ್ಕಿಲ ತರುಣ ಕಲಾವೃಂದ ಸಭಾಂಗಣದಲ್ಲಿ ಜರುಗಲಿದೆ. ಡ. ರಮಾನಂದ ಬನಾರಿ ಉದ್ಘಾಟಿಸುವರು. ಪ್ರೊ. ಪಿ.ಎನ್ ಮೂಡಿತ್ತಾಯ ಅಧ್ಯಕ್ಷತೆ ವಹಿಸುವರು. ಬಿ. ಬಾಲಕೃಷ್ಣ ಅಗ್ಗಿತ್ತಾಯ ಮಧೂರು ಮುಖ್ಯ ಅತಿಥಿಯಾಗಿ ಭಾಗವಹಿಸುವರು.
ಕತೆಗಾರರಾದ ವೈ. ಸತ್ಯನಾರಾಯಣ ಕಾಸರಗೋಡು, ಗಣೇಶ್ ಪ್ರಸಾದ್ ನಾಯಕ್ ಮಂಜೇಶ್ವರಮ ಸ್ನೇಹಲತಾ ದಿವಾಕರ್, ಸುಂದರ ಬಾರಡ್ಕ ಭಾಗವಹಿಸುವರು. ಡಾ. ಯು. ಮಹೇಶ್ವರಿ, ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಡಾ. ರಾಧಾಕೃಷ್ಣ ಬೆಳ್ಳುರು, ಬಿ.ರಾಂ ಮೂರ್ತಿ, ಶಶಿ ಭಾಟಿಯಾ ಸಮೀಕ್ಷೆ-ಸಂವಾದ ನಡೆಸುವರು.
ಪರಕ್ಕಿಲದಲ್ಲಿ ಕಥಾ ಗೋಷ್ಠಿ, ಸಮೀಕ್ಷೆ-ಸಂವಾದ ಕಾರ್ಯಕ್ರಮ
0
October 11, 2022