ಬದಿಯಡ್ಕ: ಏತಡ್ಕದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಜಯದಶಮಿಯಂದು ಶಾರದಾಪೂಜೆಯು ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು. ಪಡಿಕ್ಕಲ್ಲು ಲಕ್ಷ್ಮೀನಾರಾಯಣ ಭಟ್ ನೇತೃತ್ವದಲ್ಲಿ ಶಾರದಾ ಪೂಜಾ ಕಾರ್ಯಕ್ರಮವು ಜರಗಿತು. ಮುಖ್ಯೋಪಾಧ್ಯಾಯ ಸುಬ್ರಹ್ಮಣ್ಯ ಭಟ್ ಮಕ್ಕಳಿಗೆ ವಿದ್ಯಾರಂಭ ನಡೆಸಿದರು. ಶಾಲಾ ವಿದ್ಯಾರ್ಥಿಗಳು ಭಜನೆ ಮತ್ತು ವಿದ್ವಾನ್ ಮುರಳಿ ಮಾಧವ ಪೆರಿಂಜೆ ಇವರ ನೇತೃತ್ವದಲ್ಲಿ ಶಾಸ್ತ್ರೀಯ ಸಂಗೀತ ಸೇವೆ ನಡೆಯಿತು. ವಿಶೇಷ ಸಾಂಸ್ಕ್ರತಿಕ ಕಾರ್ಯಕ್ರಮವಾಗಿ ಶಾಲಾ ವಿದ್ಯಾರ್ಥಿಗಳಿಂದ 'ಪಾರ್ಥಸಾರಥ್ಯ -ವಿದುರಾಥಿತ್ಯ' ತಾಳಮದ್ದಳೆ ಅಧ್ಯಾಪಕ ರಾಜಾರಾಮ ಕುಂಜಾರು ನಿರ್ದೇಶನದಲ್ಲಿ, ವೆಂಕಟ್ರಾಜ ಕುಂಟಿಕಾನರವರ ಸಾರಥ್ಯದಲ್ಲಿ ನಡೆಯಿತು. ಚೆಂಡೆ -ಮದ್ದಳೆಯಲ್ಲಿ ಹಿರಿಯ ಕಲಾವಿದರಾದ ಅಡ್ಕ ಕೃಷ್ಣ ಭಟ್ ಮತ್ತು ಈಶ್ವರ ಮಲ್ಲ ಸಹಕರಿಸಿದರು.
ಪಾರ್ಥ ಸಾರಥ್ಯದಲ್ಲಿ ತನುμÁನಾಥ್(ಶ್ರೀಕೃಷ್ಣ), ಅಕ್ಷಯ(ಕೌರವ), ನಮಿತಾ(ಅರ್ಜುನ), ಪ್ರಣವ್ ಎಚ್. ಕೆ.(ಬಲರಾಮ)ಪಾತ್ರಗಳನ್ನು ನಿರ್ವಹಿಸಿದರು. ವಿದುರಾಥಿತ್ಯದಲ್ಲಿ ಶ್ರೀನಿಕಾ ವಿ(ಶ್ರೀಕೃಷ್ಣ), ಧನ್ಯಶ್ರೀ ನೇರಪ್ಪಾಡಿ(ದ್ರೌಪದಿ), ವರುಣ. ಕೆ.(ಭೀಮ), ಸುಪ್ರೀತ್ ಹೆಗಡೆ(ವಿದುರ) ಅಮಿತಾ ಕೆ(ಧರ್ಮರಾಯ), ತನ್ವಿತ್ ರಾಜ್(ಅರ್ಜುನ), ಪೂರ್ಣೇಶ್ ಕೆ ಎನ್(ನಕುಲ), ಲಕ್ಷ್ಮಿತಾ ಎಚ್ ಎಸ್(ಸಹದೇವ) ಉತ್ತಮ ನಿರ್ವಹಣೆ ನೀಡಿದರು.
ಭಾಗವತರಾದ ವೆಂಕಟ್ರಾಜ ಕುಂಟಿಕಾನ, ಹಾಗೂ ಕೃಷ್ಣ ಭಟ್ ಮತ್ತು ಈಶ್ವರ ಮಲ್ಲರವರ ಅದ್ಭುತ ನುಡಿಸಾಣೆ ಕಾರ್ಯಕ್ರಮದ ಒಟ್ಟಂದ ಹೆಚ್ಚಿಸುವಲ್ಲಿ ಯಶಸ್ವಿಯಾಯಿತು.
ಅಧ್ಯಾಪಕ ರಾಜಾರಾಮ ಕೆ. ವಿ ಸ್ವಾಗತಿಸಿ, ಅಧ್ಯಾಪಕ ಸುಧೀರಕೃಷ್ಣ ಪಿ. ಎಲ್ ವಂದಿಸಿದರು. ಶಾಲಾ ಮಕ್ಕಳ ರಕ್ಷಕರು, ಶಿಕ್ಷಕರು, ಊರ ಯಕ್ಷಗಾನ ಅಭಿಮಾನಿಗಳು ಉಪಸ್ಥಿತರಿದ್ದರು.
ಏತಡ್ಕ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ತಾಳಮದ್ದಳೆ
0
October 10, 2022
Tags