ಕುಂಬಳೆ: ಭಾನುವಾರ ರಾತ್ರಿ ಮೃತಪಟ್ಟ ಸರೋವರ ಕ್ಷೇತ್ರ ಅನಂತಪುರ ಸನ್ನಿಧಿಯ ಮೊಸಳೆ ಬಬಿಯಾಗೆ ಸ್ಮಾರಕ ನಿರ್ಮಾಣವಾಗಲಿದೆ. ಬಬಿಯಾ ಸ್ಮರಣಾರ್ಥ ದೇವಸ್ಥಾನದ ಮುಂಭಾಗದಲ್ಲಿ ಬಬಿಯಾ ಸ್ಮಾರಕ ಮಂದಿರ ನಿರ್ಮಿಸಲಾಗುವುದು ಎಂದು ದೇವಸ್ಥಾನದ ಅಧಿಕಾರಿಗಳು ತಿಳಿಸಿದ್ದಾರೆ.
ಕೇರಳದ ಏಕೈಕ ಸರೋವರ ದೇವಸ್ಥಾನ ಕುಂಬಳೆ ಅನಂತಪುರ ಸನ್ನಿಧಿಯ ಬಬಿಯಾ ಎಂಬ ಮೊಸಳೆ ಪ್ರಾಣ ಕಳೆದುಕೊಂಡಿತ್ತು. ದೇವಸ್ಥಾನಕ್ಕೆ ಬಂದವರೆಲ್ಲರಿಗೂ ಬಬಿಯಾ ಒಂದು ಕೌತುಕ. ದೇವಸ್ಥಾನಕ್ಕೆ ಬರುವ ಪ್ರತಿಯೊಬ್ಬ ಭಕ್ತರನ್ನೂ ಬೆರಗುಗೊಳಿಸುತ್ತಿದ್ದ ಮೊಸಳೆ ಈಗ ಎಲ್ಲರ ಮನದಲ್ಲೂ ಆದ್ರ್ರ ಸ್ಮರಣೆಯಾಗಿದೆ.
ಸೋಮವಾರ ಮಧ್ಯಾಹ್ನ ಸಾವಿರಾರು ಮಂದಿಯ ಸಮ್ಮುಖದಲ್ಲಿ ದೇವಸ್ಥಾನದ ಆವರಣದಲ್ಲಿ ಬಬಿಯಾನ ಅಂತ್ಯಕ್ರಿಯೆ ನೆರವೇರಿತು. ಇದಾದ ಬಳಿಕ ಸ್ಮಾರಕ ನಿರ್ಮಾಣದ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು. ಪೋಸ್ಟ್ ಮಾರ್ಟಂ ವರದಿ ಪ್ರಕಾರ ಬಬಿಯಾ ವಯೋಸಹಜವಾಗಿ ಶನಿವಾರ ಮಧ್ಯಾಹ್ನ ಮೃತಪಟ್ಟಿದೆ. ಸುಮಾರು ಒಂದು ತಿಂಗಳಿನಿಂದ ಮೊಸಳೆಗೆ ಅಸ್ವಸ್ಥತೆ ಕಂಡುಬಂದು ಆಹಾರ ಸೇವಿಸುತ್ತಿರಲಿಲ್ಲ. 2 ದಿನಗಳ ಹಿಂದೆ ಮಂಗಳೂರಿನ ವೈದ್ಯರೊಬ್ಬರನ್ನು ಕರೆಸಿ ಆರೋಗ್ಯ ತಪಾಸಣೆ ನಡೆಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶ್ರೀಅನಂತಪುರ ದೇವಸ್ಥಾನವು ಕೇರಳದ ಏಕೈಕ ಸರೋವರ ದೇವಾಲಯವಾಗಿದೆ. ಈ ದೇವಾಲಯವು ಕುಂಬಳೆಯಿಂದ ಐದು ಕಿಲೋಮೀಟರ್ ದೂರದ ನಾಯ್ಕಾಪು ಸಮೀಪದಲ್ಲಿದೆ.ಕೆರೆಯಲ್ಲಿದ್ದ ಮೊಸಳೆ ದೈವೀ ಭಾವದೊಂದಿಗೆ ದೇವಾಲಯದμÉ್ಟೀ ಪ್ರಸಿದ್ಧವಾಗಿತ್ತು.
ಅಗಲಿದ ಬಬಿಯಾ ನೆನಪಿಗಾಗಿ ಸ್ಮಾರಕ: ದೇವಸ್ಥಾನದಿಂದ ಬಬಿಯಾ ನೆನಪಿನ ಮಂದಿರ ನಿರ್ಮಾಣಕ್ಕೆ ಸಿದ್ಧತೆ
0
October 11, 2022
Tags