ಕಾಸರಗೋಡು: ವಿಶ್ವಕಪ್ ಫುಟ್ಬಾಲ್ಗೆ ಸಂಬಂಧಿಸಿದಂತೆ ಮಾದಕ ದ್ರವ್ಯ ಮುಕ್ತ ಜಾಗೃತಿಯ ಅಂಗವಾಗಿ ಕ್ರೀಡಾ ಇಲಾಖೆ ಆಯೋಜಿಸಿದ್ದ 'ಒನ್ ಮಿಲಿಯನ್ ಗೋಲ್' ಅಭಿಯಾನ- 2022 ಮುಕ್ತಾಯಗೊಂಡಿದೆ. ಕಾಸರಗೋಡು ಕಲೆಕ್ಟರೇಟ್ ಆವರಣದಲ್ಲಿ ನಡೆದ ಸಮಾರೋಪ ಸಮಾರಂಭವನ್ನು ಸಂಸದ ರಾಜಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿದರು. ಶಾಸಕ ಎನ್.ಎ.ನೆಲ್ಲಿಕುನ್ ಅಧ್ಯಕ್ಷತೆ ವಹಿಸಿದ್ದರು.
ಗೋಲ್ ತರಬೇತಿ ಯೋಜನೆಯಲ್ಲಿ ತರಬೇತಿ ಪಡೆದ ಮಕ್ಕಳು, ಕಲೆಕ್ಟರೇಟ್ ಸಿಬ್ಬಂದಿ, ಚಿನ್ಮಯ ವಿದ್ಯಾಲಯ, ನಾಯ್ಮಾರ್ ಮೂಲೆ ವಿದ್ಯಾಲಯ ಸೇರಿದಂತೆ ಹಲವರು ಗೋಲು ಗಳಿಸಲು ಆಗಮಿಸಿದ್ದರು.
ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶಾನವಾಸ್ ಪಾದೂರು, ಸಹಾಯಕ ಜಿಲ್ಲಾಧಿಕಾರಿ ಮಿಥುನ್ ಪ್ರೇಮರಾಜ್, ಜಿಲ್ಲಾ ಸ್ಪೋಟ್ರ್ಸ್ ಕೌನ್ಸಿಲ್ ಅಧ್ಯಕ್ಷ ಹಬೀಬ್ ರೆಹಮಾನ್, ಉಪಾಧ್ಯಕ್ಷ ಪಿ.ಅಶೋಕನ್ ಮಾಸ್ಟರ್, ಜಿಲ್ಲಾ ಕ್ರೀಡಾ ಮಂಡಳಿ ಕಾರ್ಯದರ್ಶಿ ಎಂ.ಎಸ್.ಸುದೀಪ್ ಬೋಸ್, ಜಿಲ್ಲಾ ಕ್ರೀಡಾ ಮಂಡಳಿಯ ಕಾರ್ಯಕಾರಿ ಸದಸ್ಯರಾದ ಪಲ್ಲಂ ನಾರಾಯಣನ್, ಅನಿಲ್. ಬಂಗಳಂ, ಜಿಲ್ಲಾ ರಾಜ್ಯ ಕ್ರೀಡಾ ಮಂಡಳಿ ನಾಮನಿರ್ದೇಶಿತ ಟಿ. ವಿ.ಬಾಲನ್, ಸಹಾಯಕ ಅಬಕಾರಿ ಆಯುಕ್ತ ಎಸ್.ಕೃಷ್ಣಕುಮಾರ್, ವೃತ್ತ ನಿರೀಕ್ಷಕ ಟೋನಿ ಐಸಾಕ್, ವಿಮುಕ್ತಿ ಜಿಲ್ಲಾ ಸಂಯೋಜಕಿ ಸ್ನೇಹಾ, ಸ್ಪೋಟ್ರ್ಸ್ ಕೌನ್ಸಿಲ್ ಸಿಬ್ಬಂದಿ, ತರಬೇತುದಾರ ಚಿನ್ಮಯ, ನಾಯ್ಮಾರ್ ಮೂಲೆ ವಿದ್ಯಾಲಯದ ಶಿಕ್ಷಕರು, ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಮತ್ತಿತರರು ಭಾಗವಹಿಸಿದ್ದರು.
'ಒನ್ ಮಿಲಿಯನ್ ಗೋಲ್' ಅಭಿಯಾನ- 2022: ಸಮಾರೋಪ
0
November 22, 2022
Tags