ಕಾಸರಗೋಡು: ಸ್ವಯಂಸೇವಕರ ನಿರ್ದೇಶನಾಲಯ ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಜಂಟಿಯಾಗಿ ಸಾಮಾಜಿಕ ಸ್ವಯಂಸೇವಕರ ಸದಸ್ಯರಾಗಿರುವವರಿಗೆ ಮತ್ತು ಸದಸ್ಯರಾಗಲು ಆಸಕ್ತಿ ಹೊಂದಿರುವವರಿಗೆ ವಿಪತ್ತು ಸಿದ್ಧತೆಗಾಗಿ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿತ್ತು. ಕಾಸರಗೋಡು ಮುನ್ಸಿಪಲ್ ಟೌನ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ಉದ್ಘಾಟಿಸಿದರು. ಎಡಿಎಂಎಕೆ ರಾಮೇಂದ್ರನ್ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಜಿಲ್ಲಾಧಿಕಾರಿ ಡಾ. ಮಿಥುನ್ ಪ್ರೇಮ್ ರಾಜ್ ಮುಖ್ಯ ಅತಿಥಿಯಾಗಿದ್ದರು.
ಪ್ರಥಮ ಚಿಕಿತ್ಸೆ ಮತ್ತು ಜೀವ ಸಂರಕ್ಷಣೆ ಕುರಿತು ಡಾ.ಸಿ.ಎಂ.ಕೈಂಜಿ ಹಾಗೂ ಅಗ್ನಿ ಸುರಕ್ಷತೆ ಕುರಿತು ಹಿರಿಯ ಅಗ್ನಿಶಾಮಕ ಮತ್ತು ರಕ್ಷಣಾಧಿಕಾರಿ ಕೆ.ವಿ.ಮನೋಹರ್ ತರಗತಿ ನಡೆಸಿದರು. ಪ್ರೇಮ್ಜಿ ಪ್ರಕಾಶ್, ಡಿಡಿಎಂಎ ಅಪಾಯ ವಿಶ್ಲೇಷಕ, ಕೇರಳ ಯೂತ್ ಲೀಡರ್ಶಿಪ್ ಅಕಾಡೆಮಿ ಪ್ರತಿನಿಧಿ ಅನಂತು ಕೆ.ಕೃಷ್ಣನ್ ಅವರು ವಿಪತ್ತು ನಿರ್ವಹಣೆ ಮತ್ತು ಸ್ವಯಂ ಸೇವಕರ ಮಹತ್ವ ಕರ್ತವ್ಯದ ಕುರಿತು ತರಗತಿ ತೆಗೆದುಕೊಂಡರು. ತರಬೇತಿಯಲ್ಲಿ ಕಾಸರಗೋಡು ನಗರಸಭೆ ಹಾಗೂ 6 ಪಂಚಾಯತ್ ವ್ಯಾಪ್ತಿಯ ಸ್ವಯಂಸೇವಕರು ಭಾಗವಹಿಸಿದ್ದರು. ಪ್ರೇಮ್ಜಿ ಪ್ರಕಾಶ್ ಸ್ವಾಗತಿಸಿ, ಜೂನಿಯರ್ ಅಧೀಕ್ಷಕ ನಿಜು ವಂದಿಸಿದರು.
ಸ್ವಯಂಸೇವಕರಿಗೆ ವಿಪತ್ತು ಸಿದ್ಧತೆ ತರಬೇತಿ
0
November 22, 2022
Tags