HEALTH TIPS

ಪದೇಪದೇ ಕೈಕೊಡುತ್ತಿರುವ ಇ-ಪೋಸ್: ಪಡಿತರ ಅಂಗಡಿಗಳಲ್ಲಿ ಅತಂತ್ರತೆ: ಸಂಕಷ್ಟ


     ತಿರುವನಂತಪುರ: ಇಪಿಒಎಸ್ ಯಂತ್ರಗಳು ಪದೇ ಪದೇ ಕೆಟ್ಟು ಹೋಗುತ್ತಿರುವುದರಿಂದ ಪಡಿತರ ಅಂಗಡಿಗಳು ಅಸ್ತವ್ಯಸ್ತಗೊಳ್ಳುತ್ತಿವೆ. ಪದೇ ಪದೇ ಸ್ಥಗಿತವಾಗುತ್ತಿರುವುದರಿಂದ ಪಡಿತರ ವಿತರಣೆಗೆ ತೊಂದರೆಯಾಗಿದೆ.
         ಕಳೆದ ಮೂರು ದಿನಗಳಿಂದ ಕಾರ್ಯಾಚರಣೆ ಭಾಗಶಃ ಸಂದಿಗ್ದಗೊಂಡಿದೆ ಎಂದು ಪಡಿತರ ವರ್ತಕರು ತಿಳಿಸಿದ್ದಾರೆ. ಒಟಿಪಿ ಬಳಸಿ ಪಡಿತರ ವಿತರಣೆಯೂ ನಿಷ್ಫಲವಾಗಿದೆ.
         ಕಳೆದ ಸೋಮವಾರ ಮತ್ತು ಮಂಗಳವಾರ ಸಂಪೂರ್ಣ ಸ್ಥಗಿತಗೊಂಡಿದ್ದ ವ್ಯವಸ್ಥೆ ಬುಧವಾರ ಮತ್ತು ಗುರುವಾರ ಸ್ವಲ್ಪ ಸುಧಾರಿಸಿತ್ತಾದರೂ ಶುಕ್ರವಾರ ಮತ್ತು ಶನಿವಾರ ಸಂಪೂರ್ಣ ಅಸ್ತವ್ಯಸ್ತವಾಗಿದೆ ಎನ್ನುತ್ತಾರೆ ಪಡಿತರ ಅಂಗಡಿ ಮಾಲೀಕರು. ವ್ಯಾಪಾರಿಗಳು ಪರಿಹಾರದ ನಿರೀಕ್ಷೆಯಲ್ಲಿದ್ದಾರೆ.
          ಪ್ರಸ್ತುತ, ಅನೇಕ ಜನರು ಮಾಹಿತಿ ಪಡೆಯಲು ಯಂತ್ರದ ಮೇಲೆ ಒಮ್ಮೆ ಬೆರಳು ಅದುಮುವ ಬದಲು ಐದಾರು ಬಾರಿ ಬೆರಳನ್ನು ಒತ್ತಬೇಕಾಗುತ್ತದೆ. ವ್ಯವಸ್ಥೆ ಹಾಳಾಗುತ್ತಿದ್ದಂತೆ ಹಲವರು ಕಾದು ಹಿಂತಿರುಗುತ್ತಾರೆ. ಪಡಿತರ ಅಂಗಡಿ ಮಾಲೀಕರೂ ಸಾಫ್ಟ್‍ವೇರ್ ವೈಫಲ್ಯಕ್ಕೆ ಸ್ಥಳೀಯರೇ ಕಾರಣ ಎಂದು ದೂರುತ್ತಿದ್ದಾರೆ.
         ನಾಲ್ಕು ತಿಂಗಳ ಹಿಂದಿನವರೆಗೂ ಲಭಿಸುತ್ತಿದ್ದ ಮೂರ್ನಾಲ್ಕು ಕಿಲೋ ತೂಕದ ಗೋಧಿಹುಡಿ(ಅಟ್ಟ) ಈಗ ಸಿಗುವುದೇ ಇಲ್ಲ. ನೀಲಿ ಮತ್ತು ಬಿಳಿ ಕಾರ್ಡ್ ಹೊಂದಿರುವವರು ನಾಲ್ಕು ತಿಂಗಳಿಂದ ಗೋಧಿಹುಡಿ ಪಡೆದಿಲ್ಲ. ಜನಸಾಮಾನ್ಯರ ಬಹುದಿನಗಳ ಬೇಡಿಕೆಯಾದ ಗೋಧಿಹುಡಿ ಸಿಗದಿರುವುದು ಪಡಿತರ ಅಂಗಡಿ ಮಾಲೀಕರನ್ನೂ ಕಾಡುತ್ತಿದೆ. ಕಾರ್ಡುದಾರರು ಗೋಧಿಹುಡಿ  ಮತ್ತು ಬಿಳ್ತಿಗೆ ಅಕ್ಕಿ ನಡುವಿನ ವಿತರಣಾ ಅನುಪಾತದಲ್ಲಿ ಬದಲಾವಣೆಗೆ ಒತ್ತಾಯಿಸುತ್ತಿದ್ದಾರೆ.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries