ಪೆರ್ಲ: ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಅವರ ಸಂಸದ ನಿಧಿಯನ್ನು ಉಪಯೋಗಿಸಿ ಪೆರ್ಲ ಪೇಟೆಯ ವ್ಯಾಪಾರಿಭವನದ ಪರಿಸರದಲ್ಲಿ ಸ್ಥಾಪಿಸಲಾದ ಹೈಮಾಸ್ಕ್ ಲೈಟಿನ ಲೋಕಾರ್ಪಣಾ ಕಾರ್ಯಕ್ರಮ ಜರಗಿತು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿದರು. ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಅಧ್ಯಕ್ಷತೆ ವಹಿಸಿದ್ದರು.
ಪಂ.ಉಪಾಧ್ಯಕ್ಷೆ ಡಾ.ಫಾತಿಮತ್ ಝಹನಾಸ್, ಜಿಲ್ಲಾ ಪಂ.ಸದಸ್ಯ ನಾರಾಯಣ ನಾಯ್ಕ್, ಪಂ.ಸದಸ್ಯರಾದ ಕುಸುಮಾವತಿ ಟೀಚರ್, ರಮ್ಲ,ಮಾಜಿ ಉಪಾಧ್ಯಕ್ಷರಾದ ಆಯಿμÁ ಎ.ಎ, ಸಿದ್ದೀಕ್ ಹಾಜಿ ಖಂಡಿಗೆ, ವ್ಯಾಪಾರಿ ನೇತಾರ ರಾಜರಾಮ ಪೆರ್ಲ ಮೊದಲಾದವರು ಪಾಲ್ಗೊಂಡಿದ್ದರು. ವ್ಯಾಪಾರಿ ಏಕೋಪನ ಸಮಿತಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಸ್ವಾಗತಿಸಿ, ಪಂ.ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ್ ವಂದಿಸಿದರು.