HEALTH TIPS

ಉಚಿತ ಆಯುರ್ವೇದ ವೈದ್ಯಕೀಯ ಶಿಬಿರ


           ಕುಂಬಳೆ : ಕೋಟೆಕ್ಕಾರು ಶ್ರೀ ಧೂಮಾವತಿ ಭಕ್ತವೃಂದದ ನೇತೃತ್ವದಲ್ಲಿ ಉಚಿತ ಆಯುರ್ವೇದ ವೈದ್ಯಕೀಯ ಶಿಬಿರ ಭಾನುವಾರ ಕೋಟೆಕ್ಕಾರಿನಲ್ಲಿ ನಡೆಯಿತು. ಕುಂಬಳೆ ಗ್ರಾಮ ಪಂಚಾಯತಿ ಸದಸ್ಯೆ ಪ್ರೇಮಲತ ಎಸ್  ಉದ್ಘಾಟಿಸಿದರು
          ಶ್ರೀ ಧೂಮಾವತಿ ದೇವಸ್ಥಾನ, ಕೋಟೆಕ್ಕಾರು ಇದರ ಅರ್ಚಕ  ಲಿಂಗಪ್ಪ ಪೂಜಾರಿ, ಸುವರ್ಣ ತರವಾಡು ಕೋಟೆಕ್ಕಾರು ಇದರ ಅರ್ಚಕ ಅಮ್ಮು ಪೂಜಾರಿ ಹಾಗೂ  ಪೆರ್ಣೆ ಶ್ರೀ ಮುಚ್ಚಿಲೋಟು ಭಗವತಿ ದೈವಸ್ಥಾನದ ಅರ್ಚಕ ನಾರಾಯಣ ಪಾಟಾಳಿ ಮತ್ತಿತರರು ದೀಪ ಪ್ರಜ್ವಲನೆ ಮಾಡುವ ಮೂಲಕ ವೈದ್ಯಕೀಯ ಶಿಬಿರಕ್ಕೆ ಚಾಲನೆ ನೀಡಿದರು.
         ಡಾ.ವಿ.ವಿ. ಜೋಷಿ ಕುಂಬಳೆ,  ಡಾ. ಸಂಗೀತ ಸಚ್ಚಿದಾನಂದ ಕುಂಬಳೆ, ಡಾ. ಶ್ರೀನಿಧಿ ಸರಳಾಯ ಬದಿಯಡ್ಕ ಮತ್ತು ಡಾ.ಕೆ.ಆರ್ ಶ್ರೀಜಿತ್ ವೈದ್ಯರ ಮುಂದಾಳುತ್ವದಲ್ಲಿ ಹಲವಾರು ರೋಗಿಗಳ ತಪಾಸನೆಯೊಂದಿಗೆ ರಕ್ತದೋತ್ತಡ, ಮಧುಮೇಹ, ಇ.ಸಿ.ಜಿ. ತಪಾಸಣೆಗಳು ನಡೆಯಿತು.
        ವೆಂಕಟೇಶ್ ಶೆಣೈ ಕುಂಬಳೆ, ತೇಜಸ್ವಿನಿ ಕುಂಬಳೆ, ಸತೀಶ್ ಮೈಪಾಡಿ, ವಿನೋದ್ ಕಾಞಂಗಾಡ್, ಶರತ್ ಮಧೂರು ಮತ್ತು ಗಿರೀಶ್ ಕಾಸರಗೋಡು  ತಪಾಸಣೆ  ಮತ್ತು ಉಚಿತ ಔಷಧಿ ಪೂರೈಕೆಯಲ್ಲಿ ಸಹಕರಿಸಿದರು. ವಸಂತ ಗಟ್ಟಿ ದೇವಿನಗರ, ಯತೀಶ್, ಹರೀಶ ಗಟ್ಟಿ, ರಾಮಚಂದ್ರ ಮತ್ತಿರರು ಶಿಬಿರಕ್ಕೆ ನೇತೃತ್ವ ನೀಡಿದರು.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries