ಮಂಜೇಶ್ವರ: ಪಾವೂರು ಕೊಂಡೆಯೂರು ಗೋವಿಂದಲಚ್ಚೀಲು ಶ್ರೀ ಕೊರಗತನಿಯ ಸಾನಿಧ್ಯದ ಪ್ರತಿಷ್ಠಾ ಕಲಶಾಭಿμÉೀಕ ಜ.1 ರಂದು ಭಾನುವಾರ ವರ್ಕಾಡಿ ದಿನೇಶ್ ಕೃಷ್ಣ ತಂತ್ರಿಯವರ ದಿವ್ಯ ಹಸ್ತದಿಂದ ನಡೆಯಲಿರುವುದು. ಆ ಪ್ರಯುಕ್ತ ಆಮಂತ್ರಣ ಪತ್ರಿಕೆಯನ್ನು ಮಲರಾಯ-ಗುಳಿಗ ದೈವಸ್ಥಾನ ಮುಡಿಮಾರು ಇದರ ಪ್ರಧಾನ ಅರ್ಚಕ ಚಂದ್ರಹಾಸ ಪೂಜಾರಿ ಅವರು ಬಿಡುಗಡೆಗೊಳಿಸಿದರು.
ಬ್ರಹ್ಮ ಕಲಶೋತ್ಸವದ ಅಧ್ಯಕ್ಷ ರವಿಮುಡಿಮಾರು, ಸೇವಾ ಸಮಿತಿಯ ವಾಮನ ಮುಡಿಮಾರು, ಬ್ರಹ್ಮಕಲಶ ಸಮಿತಿಯ ಉಪಾಧ್ಯಕ್ಷರಾದ ಚಂದ್ರಹಾಸ ಶೆಟ್ಟಿ ಕಂಗುಮೆ, ಚಂದ್ರಹಾಸ ಅಂಚನ್ ಮುಡಿಮಾರು, ದಿನೇಶ್ ಕರ್ಕೆರ ಮುಡಿಮಾರು, ಪ್ರಧಾನ ಕಾರ್ಯದರ್ಶಿ ನವಿರಾಜ್ ಮುಡಿಮಾರು, ಸಹಕಾರ್ಯದರ್ಶಿ ಯತಿರಾಜ್ ಕೆದುಂಬಾಡಿ, ಪ್ರಕಾಶ್ ಮುಡಿಮಾರು, ಪ್ರಶಾಂತ್ ಮರಿಕಾಪು, ಹರೀಶ್ ಕೆದುಂಬಾಡಿ, ಉಮೇಶ್ ಮುಡಿಮಾರು, ಕೋಶಾಧಿಕಾರಿ ನವೀನ ಮುಡಿಮಾರ್ ಹಾಗೂ ಸದಸ್ಯರುಗಳಾದ ಯಶ್ವೀತ್ ಮುಡಿಮಾರ್, ರಾಜೇಶ್ ಮುಡಿಮಾರ್, ಸುರೇಶ್ ಪಂಡಿತ್ ಮರಿಕಾಪು, ರಾಕೇಶ್ ಅಂಚನ್ ಮುಡಿಮಾರು, ಹರೀಶ್ ಸುವರ್ಣ ಮುಡಿಮಾರು, ಬಾಬು ಮುಡಿಮಾರ್, ರಘು, ಶಿವರಾಮ ಮುಡಿಮಾರು, ಹರಿಪ್ರಸಾದ್ ಮುಡಿಮಾರು, ಸೀನ ಮರಿಕಾಪು ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು. ರವಿ ಮುಡಿಮಾರು ಸ್ವಾಗತಿಸಿ, ನವೀರಾಜ್ ವಂದಿಸಿದರು.
ಗೋವಿಂದಲಚ್ಚೀಲು ಶ್ರೀ ಕೊರಗತನಿಯ ಸಾನಿಧ್ಯದ ಪ್ರತಿಷ್ಠಾ ಕಲಶ ಅಭಿಷೇಕದ ಅಮಂತ್ರಣ ಪತ್ರಿಕೆ ಬಿಡುಗಡೆ
0
November 21, 2022
Tags