ಕಾಸರಗೋಡು: ಖ್ಯಾತ ವಕೀಲ, ಕಾಸರಗೋಡು ಬಾರ್ ಅಸೋಸಿಯೇಶನ್ನ ಸದಸ್ಯ ದಿ. ಪಿ.ವಿ.ಕೆ ನಾಯರ್ ಅವರ ಭಾವಚಿತ್ರ ಅನಾವರಣ ಸಮಾರಂಭ ನ. 26ರಂದು ಬೆಳಗ್ಗೆ 11.30ಕ್ಕೆ ವಿದ್ಯಾನಗರ ಚಿನ್ಮಯ ತೇಜಸ್ ಸಭಾಂಗಣದಲ್ಲಿ ಜರುಗಲಿರುವುದು.
ಕೇರಳ ಹೈಕೋರ್ಟ್ ನ್ಯಾಯಾಧೀಶೆ ಜಸ್ಟಿಸ್ ಅನು ಶಿವರಾಮನ್ ಭಾವಚಿತ್ರ ಅನಾವರಣಗೊಳಿಸುವರು. ಹೈಕೋರ್ಟು ನ್ಯಾಯಾಧೀಶರಾದ ಜಸ್ಟಿಸ್ ವಿ.ಜಿ ಅರುಣ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಕಾಸರಗೋಡು ಬಾರ್ ಅಸೋಸಿಯೇಶನ್ ಅಧ್ಯಕ್ಷ ವಕೀಲ ಎಂ.ನಾರಾಯಣ ಭಟ್ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯದ ನ್ಯಾಯಾಧೀಶ ಸಿ. ಕೃಷ್ಣ ಕುಮಾರ್, ಹಿರಿಯ ವಕೀಲ ಐ.ವಿ ಭಟ್, ಹೊಸದುರ್ಗ ಬಾರ್ ಅಸೋಸಿಯೇಶನ್ ಅಧ್ಯಕ್ಷ ರಾಜ್ಮೋಹನ್ ಪಾಲ್ಗೊಳ್ಳುವರು.
ಇಂದು ಖ್ಯಾತ ವಕೀಲ ದಿ. ಪಿ.ವಿ.ಕೆ ನಾಯರ್ ಭಾವಚಿತ್ರ ಅನಾವರಣ
0
November 24, 2022
Tags