HEALTH TIPS

ಸವಾಕ್ ನೀಲೇಶ್ವರ ಬ್ಲಾಕ್ ಕಲೋತ್ಸವ ಸಂಪನ್ನ


         ಮುಳ್ಳೇರಿಯ: ಕಲಾವಿದರ ಸಂಘಟನೆಯಾದ ಸ್ಟೇಜ್ ಆರ್ಟಿಸ್ಟ್ ಆಂಡ್ ವರ್ಕರ್ಸ್ ಅಸೋಸಿಯೇಶನ್(ಸವಾಕ್) ನೀಲೇಶ್ವರ ಬ್ಲಾಕ್ ಕಲೋತ್ಸವ ನೀಲೇಶ್ವರ ಪಟ್ಟೇನ ಜನಶಕ್ತಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.
            ಕಾರ್ಯಕ್ರಮವನ್ನು ನೀಲೇಶ್ವರ ನಗರಸಭಾ ಉಪಾಧ್ಯಕ್ಷ ಮುಹಮ್ಮದ್ ರಾಫಿ ಉದ್ಘಾಟಿಸಿದರು. ಕೆ.ಪವಿತ್ರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸವಾಕ್ ಸಂಘಟನೆಯ ಕೇರಳ ರಾಜ್ಯ ಉಪಾಧ್ಯಕ್ಷ ಉಮೇಶ್.ಎಂ.ಸಾಲಿಯಾನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸವಾಕ್ ಕಾಸರಗೋಡು ಜಿಲ್ಲಾ ಉಪಾಧ್ಯಕ್ಷರುಗಳಾದ ದಿವಾಕರ.ಪಿ ಅಶೋಕ ನಗರ, ಭಾರತಿ ಬಾಬು, ನರಸಿಂಹ ಬಲ್ಲಾಳ್, ಕಾಸರಗೋಡು ಬ್ಲಾಕ್ ಅಧ್ಯಕ್ಷÀ ದಯಾಪ್ರಸಾದ್, ಸದಸ್ಯೆ ಸುಶೋಭಿನಿ, ನೀಲೇಶ್ವರ ಬ್ಲಾಕ್ ಅಧ್ಯಕ್ಷ ಎಂ.ಗಂಗಾಧರನ್, ಮನೋಜ್ ನೀಲೇಶ್ವರ, ರಾಜನ್ ಪಣಿಕ್ಕರ್ ಕಕ್ಕಾಟ್, ಮಧು ಬಂಗಳಂ ಮುಂತಾದವರು ಉಪಸ್ಥಿತರಿದ್ದರು.
           ಸುಗಮ ಸಂಗೀತ, ಜಾನಪದ ಹಾಡು,ಸಿನಿಮ್ಯಾಟಿಕ್ ಡ್ಯಾನ್ಸ್,ಭರತನಾಟ್ಯ, ಮಿಮಿಕ್ರಿ ಮುಂತಾದ ಸ್ಪರ್ಧೆಗಳು ನಡೆದು ವಿಜಯಿಗಳಿಗೆ ಬಹುಮಾನ ವಿತರಿಸಲಾಯಿತು. ಕಲಾವಿದರಾದ ವಿಶ್ವಾಸ್ ಪಳ್ಳಿಕ್ಕೆರೆಯವರನ್ನು ಗೌರವಿಸಲಾಯಿತು. ಸ್ಪರ್ಧೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದವರು ಡಿಸೆಂಬರ್ ತಿಂಗಳಲ್ಲಿ ನಡೆಯುವ ಜಿಲ್ಲಾ ಸ್ಪರ್ಧೆಯಲ್ಲಿ ಭಾಗವಹಿಸುವರು.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries