HEALTH TIPS

ತುಂಬಾ ಕ್ಲೋಸ್​ ಆಗಿ ಇದ್ದಿದ್ದೇ ತಪ್ಪಾಯ್ತಾ? ಶಿಕ್ಷಕಿ ದುರಂತ ಸಾವು, ಡೆತ್​ನೋಟ್​ನಲ್ಲಿತ್ತು ದೈಹಿಕ ಶಿಕ್ಷಕನ ಕರಾಳ ಮುಖ

 

              ಕೊಚ್ಚಿ: ಶಿಕ್ಷಕಿಯೊಬ್ಬಳ ಆತ್ಮಹತ್ಯೆ ಪ್ರಕರಣ ಸಂಬಂಧ ಅದೇ ಶಾಲೆಯ ಮತ್ತೊಬ್ಬ ಶಿಕ್ಷಕನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಡೆತ್​ನೋಟ್​ನಲ್ಲಿ ಶಿಕ್ಷಕನ ಹೆಸರು ಉಲ್ಲೇಖವಾಗಿದ್ದರಿಂದ ಆತನನ್ನು ಬಂಧಿಸಲಾಗಿದೆ.

             ಬಂಧಿತನನ್ನು ರಾಮದಾಸ್​​ ಎಂದು ಗುರುತಿಸಲಾಗಿದೆ.

ಈತ ಮಲಪ್ಪುರಂ ಜಿಲ್ಲೆಯ ವೆಂಗಾರಾ ಮಾಡೆಲ್​ ಟೌನ್​ನ ಪ್ರೌಢಶಾಲೆಯ ದೈಹಿಕ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ರಾಮದಾಸ್​ನಲ್ಲಿ ಬಂಧಿಸಲಾಗಿದೆ.

                ಮೃತ ಟಿ ಬೈಜು ಅದೇ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಳು. ಸೆ. 17ರಂದು ಆಕೆಯ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ಬೈಜು ಮತ್ತು ರಾಮದಾಸ್​ ವಿದ್ಯಾರ್ಥಿ ಪೊಲೀಸ್​​ ಕೆಡೆಟ್​ನ ಉಸ್ತುವಾರಿಯಾಗಿದ್ದರು.

                  ಬೈಜು ಬರೆದಿದ್ದ ಡೆತ್​ನೋಟ್‌ನಲ್ಲಿ ರಾಮದಾಸ್​ ಹೆಸರನ್ನು ನಮೂದಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ಸಾಕ್ಷಿಗಳ ಹೇಳಿಕೆಗಳು ಮತ್ತು ಡಿಜಿಟಲ್ ಸಾಕ್ಷ್ಯಗಳು ರಾಮದಾಸ್ ವಿರುದ್ಧ ಇವೆ ಎಂದು ಪೊಲೀಸರು ಹೇಳಿದ್ದಾರೆ. ಆರೋಪಿಯನ್ನು ನ್ಯಾಯಾಲಯವು ಪೊಲೀಸರಿಗೆ ಒಪ್ಪಿಸಿದೆ.

             ಬೈಜು ಮತ್ತು ರಾಮದಾಸ್​ ನಡುವೆ ತುಂಬಾ ಕ್ಲೋಸ್​ನೆಸ್​ ಇತ್ತು. ಅದನ್ನೇ ದುರುಪಯೋಗ ಪಡಿಸಿಕೊಂಡ ಆತ, ಶಿಕ್ಷಕಿಯನ್ನು ಮಾನಸಿಕ ಹಿಂಸೆಗೆ ದೂಡಿದ್ದ ಎಂಬುದು ಡೆತ್​ನೋಟ್​ನಿಂದ ತಿಳಿದುಬಂದಿದೆ. ಲೈಂಗಿಕ ಕಿರುಕುಳಕ್ಕೆ ಬೇಸತ್ತು ಬೈಜು ಸೆ.17ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಡೆತ್​ನೋಟ್​ ಪತ್ತೆಯಾದ ಹಿನ್ನೆಲೆಯಲ್ಲಿ ರಾಮದಾಸ್​ನನ್ನು ಬಂಧಿಸಲಾಗಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries