ಕೋಝಿಕ್ಕೋಡ್: ಮಲಬಾರ್ ಪ್ರವಾಸದ ವೇಳೆ ನಡೆಯಬೇಕಿದ್ದ ಕಾರ್ಯಕ್ರಮಗಳನ್ನು ತಡೆಯಲು ಕೆಲವರು ತೆರೆಮರೆಯಲ್ಲಿ ಕೆಲಸ ಮಾಡಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ಸಂಸದ ಶಶಿ ತರೂರ್ ಬಹಿರಂಗಪಡಿಸಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಕೆಲವರು ಒತ್ತಡ ಹೇರಿದ್ದಾರೆ ಎಂದು ಆರೋಪಿಸಿದರು.
ಟ್ವೀಟ್ ಮೂಲಕ ಅವರು ಈ ಟೀಕೆ ಮಾಡಿದ್ದಾರೆ. ಶಶಿ ತರೂರ್ ಅವರ ಮಲಬಾರ್ ಪ್ರವಾಸಕ್ಕೆ ಸೇರಿದ್ದಕ್ಕೆ ಕಾಂಗ್ರೆಸ್ ನಾಯಕರು ಕೆಲವರನ್ನು ಆರೋಪಿಸುತ್ತಿರುವಾಗಲೇ ಶಶಿ ತರೂರ್ ಬಹಿರಂಗ ಪಡಿಸಿದ್ದಾರೆ.
ಇದೇ ವೇಳೆ ಶಶಿ ತರೂರ್ ವಿರುದ್ಧದ ಅಘೋಷಿತ ನಿಷೇಧವನ್ನು ತೀವ್ರ ಭಾμÉಯಲ್ಲಿ ಟೀಕಿಸಿದ ಕೆ.ಮುರಳೀಧರನ್, ಅಘೋಷಿತ ನಿಷೇಧದ ಹಿಂದೆ ಯಾರಿದ್ದಾರೆ ಎಂಬುದು ಗೊತ್ತಿದೆ ಎಂದು ಡಿಸಿಸಿ ಅಧ್ಯಕ್ಷರು ಹೇಳಿದ್ದಾರೆ. ಆಗಬಾರದ್ದು ನಡೆದುಹೋಯಿತು. ಪಕ್ಷದ ಆಂತರಿಕ ವಿಚಾರವಾಗಿದ್ದರಿಂದ ಬಾಯಿ ಬಿಡುವುದಿಲ್ಲ ಎಂಬುದು ಮುರಳೀಧರನ್ ಅವರು ಹೇಳಿರುವರು.
ನಿಷೇಧದ ಹಿಂದೆ ಷಡ್ಯಂತ್ರವಿದೆ. ವಿವಾದದ ಹಿಂದೆ ಮುಖ್ಯಮಂತ್ರಿ ಕೈವಾಡ ಇರಬಹುದು. ಎಐಸಿಸಿಗೆ ದೂರು ನೀಡುವ ಅಗತ್ಯವಿಲ್ಲ. ತನಿಖೆಯಿಂದ ಯಾವುದೇ ಪ್ರಯೋಜನವಿಲ್ಲ ಎಂದು ಕೆ ಮುರಳೀಧರನ್ ಹೇಳಿರುವರು.
ತನಗೆ ವೇದಿಕೆ ನೀಡದಿರಲು ಪ್ರಯತ್ನಿಸಿದರು ಯಾರೆಂದು ಗೊತ್ತು: ಶಶಿ ತರೂರ್: ಮುಖ್ಯಮಂತ್ರಿಗೆ ಕೊಡೆಹಿಡಿಯುವವರು ಇದರ ಹಿಂದಿರುವರೆಂದ ಕೆ.ಮುರಳೀಧರನ್
0
November 21, 2022