ಬದಿಯಡ್ಕ: ದಂತ ವೈದ್ಯ ಕೃಷ್ಣಮೂರ್ತಿ ಸರ್ಪಂಗಳ ನಿಗೂಢ ಸಾವಿಗೆ ಸಂಬಂಧಿಸಿದ ಸಿಸಿ ಕ್ಯಾಮರಾ ದೃಶ್ಯಾವಳಿ ಸಂಗ್ರಹಿಸಲು ಬದಿಯಡ್ಕಪೊಲೀಸರು ಕ್ರಮ ಆರಂಭಿಸಿದ್ದಾರೆ. ಬದಿಯಡ್ಕದಿಂದ ಡಾ. ಕೃಷ್ಣಮೂರ್ತಿ ಅವರು ನ. 8ರಂದು ನಿಗೂಢವಾಗಿ ನಾಪತ್ತೆಯಾಘಿದ್ದು, ಮರುದಿನ ಇವರ ಮೃತದೇಹ ಕುಮದಾಪುರ ಸನಿಹದ ರೈಲ್ವೆ ಹಳಿಯಲ್ಲಿ ಪತ್ತೆಯಗಿತ್ತು. ಈ ಮಧ್ಯೆ ಡಾ. ಕೃಷ್ಣ ಮೂರ್ತಿ ಅವರು ಕುಂದಾಪುರದಲ್ಲಿ ತಮ್ಮ ಬಟ್ಟೆ ಬದಲಾಯಿಸಿ, ನಡೆದು ಹೋಗುತ್ತಿರುವ ದೃಶ್ಯಾವಳಿ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವುದು ಬಹಿರಂಗಗೊಂಡಿದ್ದು, ಈ ಬಗ್ಗೆ ಪರಿಶೀಲನೆ ನಡೆಸುತ್ತಿರುವುದಾಘಿ ಬದಿಯಡ್ಕ ಪೊಲೀಸರು ತಿಳಿಸಿದ್ದಾರೆ. ಈಗಾಗಲೇ ಬದಿಯಡ್ಕ ಪೊಲೀಸರು ಕುಂದಾಪುರಕ್ಕೆ ತೆರಳಿ ಕೆಲವೊಂದು ಮಾಹಿತಿ ಸಂಗ್ರಹಿಸಿದ್ದಾರೆ.
ದಂತ ವೈದ್ಯ ಕೃಷ್ಣಮೂರ್ತಿ ನಿಗೂಢ ಸಾವು: ಸಿಸಿ ಕ್ಯಾಮರಾ ದೃಶ್ಯಾವಳಿ ಪೊಲೀಸರಿಂದ ಪರಿಶೀಲನೆ
0
November 23, 2022
Tags