ಮುಳ್ಳೇರಿಯ: ಯಕ್ಷಗಾನ ಪ್ರಸಂಗಕರ್ತ, ಭಾಗವತ, ಯಕ್ಷಗುರು ವಿಶ್ವವಿನೋದ ಬನಾರಿಯವರ ಅಭಿನಂದನಾ ಸಮಾರಂಭ ಇತ್ತೀಚೆಗೆ ಬನಾರಿ ಶ್ರೀಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ಕೀರಿಕ್ಕಾಡು ಮಾಸ್ತರ್ ಸ್ಮಾರಕ ಕಲಾಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ಸರೋಜಿನಿ ಬನಾರಿ ಅವರ ನಿರ್ದೇಶನದಲ್ಲಿ ‘ವೀರ ಬಬ್ರುವಾಹನ’ ಯಕ್ಷಗಾನ ಬಯಲಾಟ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಭವ್ಯಶ್ರೀ ಕುಲ್ಕುಂದ, ಚೆಂಡೆ ಮದ್ದಳೆ ವಾದನದಲ್ಲಿ ವಿಷ್ಣುಶರಣ ಬನಾರಿ ಹಾಗೂ ಚಂದ್ರಶೇಖರ ಗುರುವಾಯನಕೆರೆ ಸಹಕರಿಸಿದರು. ವೀಕ್ಷಿತ ಬಂದ್ಯಡ್ಕ (ಅರ್ಜುನ), ಸುಶ್ಮಿತಾ ಮೋಹನ್ (ಹಂಸಧ್ವಜ), ಹರ್ಷಿತ ಬೆಳ್ಳಿಪ್ಪಾಡಿ (ವೃಷಕೇತು), ಶ್ರೀಮ ಸುಳ್ಯ (ಬಬ್ರುವಾಹನ 1), ರಚಿತಾ ದೇಲಂಪಾಡಿ (ಮಂತ್ರಿ), ಬಾಸ್ಮಿತಾ ಬೆಳ್ಳಿಪ್ಪಾಡಿ (ಚಿತ್ರಾಂಗದೆ), ಕೀರ್ತನ ಬೆಳ್ಳಿಪ್ಪಾಡಿ (ಸಖಿ), ಜೀವಿಕಾ ಬಂದ್ಯಡ್ಕ (ಬಬ್ರುವಾಹನ 2), ಪಾವನ ಕನ್ಯಾನ (ಕೃಷ್ಣ) ವೇಷಧಾರಿಗಳಾಗಿ ಭಾಗವಹಿಸಿದರು.