ಕಾಸರಗೋಡು: ಕೇರಳ ಪೊಲೀಸ್ ಮಹಾ ನಿರ್ದೇಶಕ ಅನಿಲ್ಕಾಂತ್ ಕಾಸರಗೋಡು ಜಿಲ್ಲಾ ಪೊಲೀಸ್ ಕೇಂದ್ರಕ್ಕೆ ಭೇಟಿ ನೀಡಿ ಪೊಲೀಸ್ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.
ಜಿಲ್ಲೆಯ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳು ಮತ್ತು ಅಪರಾಧದ ತನಿಖೆಯ ಕುರಿತು ಸಮಗ್ರ ಚರ್ಚೆ ನಡೆಸಿದ ಡಿಜಿಪಿ, ಶಬರಿಮಲೆ ಋತುವಿನಲ್ಲಿ ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಬಗ್ಗೆ ಕೆಲವೊಂದು ಸೂಚನೆಗಳನ್ನು ನೀಡಿದರು. ಠಾಣೆ ಮಟ್ಟದ ಪೆÇಲೀಸರ ಚಟುವಟಿಕೆಗಳ ಕುರಿತು, ವಿಶೇಷವಾಗಿ ಮಹಿಳೆಯರ ವಿರುದ್ಧ, ದರೋಡೆಕೋರರ ವಿರುದ್ಧದ ಚಟುವಟಿಕೆಗಳು ಮತ್ತು ಮಾದಕ ದ್ರವ್ಯ ವಿರೋಧಿ ಚಟುವಟಿಕೆಗಳ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು, ಮಕ್ಕಳು, ಮಹಿಳೆಯರು, ಹಿರಿಯರೊಂದಿಗೆ ಸೌಹಾರ್ದಯುತವಾಗಿ ವರ್ತಿಸುವಂತೆ ಸಲಹೆ ನೀಡಿದರು.. ಅಪರಾಧದ ವಿರುದ್ಧ ಕಠಿಣ ಮತ್ತು ಸಮಯೋಚಿತ ಕ್ರಮ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಉತ್ತರ ವಲಯ ಐಜಿ ಹೊಣೆಗಾರಿಕೆ ಹೊಂದಿರುವ ಕೋಯಿಕ್ಕೋಡ್ ನಗರ ಪೊಲೀಸ್ ಆಯುಕ್ತ ಎ.ಅಕ್ಬರ್, ಕಣ್ಣೂರು ರೇಂಜ್ ಡಿ. ಐ.ಜಿ ರಾಹುಲ್ ಆರ್.ನಾಯರ್, ಕಾಸರಗೋಡು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ.ವೈಭವ್ ಸಕ್ಸೇನಾ, ಹೆಚ್ಚುವರಿ ಎಸ್.ಪಿ ಪಿ.ಕೆ ರಾಜು, ಜಿಲ್ಲೆಯ ಡಿವೈಎಸ್ಪಿಗಳು ಉಪಸ್ಥಿತರಿದ್ದರು.