HEALTH TIPS

ನೇತಾಜಿ ಇತಿಹಾಸ ತಿರುಚುವಿಕೆ ತಡೆಯಲು ಪಿಐಎಲ್

 

                  ಕೋಲ್ಕತ್ತಾ: ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರ ಜೀವನ ಮತ್ತು ಸಾಧನೆಗಳನ್ನು ಸಿನಿಮಾಗಳಲ್ಲಿ ಮತ್ತು ವಿವಿಧ ಮಾಧ್ಯಮಗಳಲ್ಲಿ ತಿರುಚಲಾಗುತ್ತಿದೆ ಎಂದು ಆರೋಪಿಸಿರುವ ನೇತಾಜಿ ಸಂಬಂಧಿಕರು, ಅಂತಹ ಚಟುವಟಿಕೆಗಳನ್ನು ನಿಲ್ಲಿಸಲು ಕ್ರಮ ತೆಗೆದುಕೊಳ್ಳುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಕಲ್ಕತ್ತಾ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಸಲ್ಲಿಸಿದ್ದಾರೆ.

                   ನೇತಾಜಿ ಅವರ ಸಂಬಂಧಿಗಳಾದ ಸೌಮ್ಯ ಶಂಕರ್‌ ಬೋಸ್‌ ಮತ್ತು ಚಂದ್ರ ಕುಮಾರ್‌ ಬೋಸ್‌ ಈ ಪಿಐಎಲ್‌ ಸಲ್ಲಿಸಿದ್ದು, 'ಭಾರತ ಸ್ವಾತಂತ್ರ್ಯ ಹೋರಾಟ ಹಾಗೂ ರಾಷ್ಟ್ರ ನಾಯಕರ ಕುರಿತು ಸಿನಿಮಾ ಹಾಗೂ ಸಮೂಹ ಮಾಧ್ಯಮಗಳ ಮುಖಾಂತರ ಯಾವುದೇ ತಪ್ಪು ಮಾಹಿತಿಗಳನ್ನು ಹರಡದಂತೆ ತಡೆಯಬೇಕು' ಎಂದು ಕೋರಿದ್ದಾರೆ.

                  'ಭಾರತ ಸರ್ಕಾರವು ನೇತಾಜಿ ಅವರ ಕುರಿತು ಈಗಾಗಲೇ ಹಲವು ಆಯೋಗಗಳ ಮೂಲಕ ತನಿಖೆ ನಡೆಸಿದೆ. ಈ ಆಯೋಗಗಳ ವರದಿಗಳನ್ನು ಸಂಸತ್ತಿನಲ್ಲಿ ಮಂಡಿಸಿ, ಒಪ್ಪಿಕೊಳ್ಳಲಾಗಿದೆ. ಆದರೆ ಕೆಲವರು ಖಾಸಗಿ ಲಾಭಕ್ಕಾಗಿ ಚಲನಚಿತ್ರ ಹಾಗೂ ಸಮೂಹ ಮಾಧ್ಯಮಗಳ ಮೂಲಕ ಪರಿಶೀಲನೆಗೊಳಪಡದ ಸಿದ್ದಾಂತಗಳನ್ನು ಹರಡುತ್ತಿದ್ದಾರೆ' ಎಂದೂ ಅವರು ಆರೋಪಿಸಿದ್ದಾರೆ.

               'ಮುಂದಿನವಾರ ಈ ಸಾರ್ವಜನಿಕ ಅರ್ಜಿಯ ವಿಚಾರಣೆ ನಡೆಯುವ ಸಾಧ್ಯತೆ ಇದೆ' ಎಂದು ಅರ್ಜಿದಾರರ ಪರ ವಕೀಲರಾದ ಸಾತ್ವಿಕ್‌ ಮಜುಂದಾರ್‌ ಭಾನುವಾರ ಹೇಳಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries