HEALTH TIPS

 ವಿದ್ಯಾನಗರ-ಮಾನ್ಯ-ನೀರ್ಚಾಲ್ ರಸ್ತೆ ಟಾರಿಂಗ್: ಹಿಂದಿನ ನಿರ್ಧಾರದಂತೆ ಬಸ್ ಸಂಚಾರ


           ಕಾಸರಗೋಡು  : ಕಾಸರಗೋಡು-ವಿದ್ಯಾನಗರ-ಮಾನ್ಯ-ನೀರ್ಚಾಲ್ ಮಾರ್ಗದಲ್ಲಿ ರಸ್ತೆ ಹದಗೆಟ್ಟ ಹಿನ್ನೆಲೆಯಲ್ಲಿ ಒಂದು ವಾರ ಕಾಲ ಬಸ್ ಸಂಚಾರ ಸ್ಥಗಿತಗೊಂಡಿದ್ದು, ಶಾಸಕ ಎನ್.ಎ.ನೆಲ್ಲಿಕುನ್ನು ಅವರ ನೇತೃತ್ವದಲ್ಲಿ ನ.5 ರಂದು ಆರ್.ಟಿ ರವರ ಕಚೇರಿಯಲ್ಲಿ ಸಭೆ ನಡೆಸಿ, ಕಾಮಗಾರಿ ಆರಂಭವಾಗುವವರೆಗೂ ಯಥಾಸ್ಥಿತಿ ಮುಂದುವರಿಯಲಿದ್ದು, ಅಗತ್ಯವಿದ್ದಲ್ಲಿ ದುರಸ್ತಿ ಕೈಗೊಳ್ಳಲಾಗುವುದು ಎಂದು ಒಪ್ಪಿಗೆ ಸೂಚಿಸಲಾಗಿತ್ತು. ರಸ್ತೆ ನಿರ್ಮಾಣ ಆರಂಭವಾದಾಗ ಬದಿಯಲ್ಲಿ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬಹುದು ಎಂದೂ ನಿರ್ಧರಿಸಲಾಗಿತ್ತು. ಈ ನಿರ್ಧಾರದ ಪ್ರಕಾರ, ನ.6 ರಿಂದ ಬಸ್ ಸಂಚಾರ ಪುನರಾರಂಭಿಸಲು ಸಹ ಒಪ್ಪಿಗೆ ನೀಡಲಾಗಿತ್ತು.
      ಈ ಮಧ್ಯೆ ಮಾನ್ಯ-ಕೋಟೆಕಣಿ ಮೂಲಕ ತಾತ್ಕಾಲಿಕ ಮಾರ್ಗದಲ್ಲಿ ಬಸ್ ಸಂಚರಿಸಲು ಕಾರ್ಯಪಾಲಕ ಇಂಜಿನಿಯರ್ ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿತ್ತು. ಆದರೆ ಈರೀತಿಯ ಬದಲಿ ಮಾಗಧಲಲಿ ಬಸ್ ಸಂಚಾರ ನಡೆಸಲು ಪ್ರತಿ ಟ್ರಿಪ್ ಗೆ 4 ಕಿ.ಮೀ.ಗೂ ಹೆಚ್ಚು ದೂರ ಸಂಚರಿಸಬೇಕಾಗುತ್ತದೆ.  12 ಟ್ರಿಪ್‍ಗಳನ್ನು ಹೊಂದಿರುವ ಬಸ್‍ಗೆ ಇಂಧನದಲ್ಲಿ 48 ಕಿಮೀ ಹೆಚ್ಚು ವೆಚ್ಚವಾಗುತ್ತದೆ ಮತ್ತು ಪ್ರತಿ ಟ್ರಿಪ್‍ಗೆ 10 ನಿಮಿಷಗಳು ಹೆಚ್ಚು ತೆಗೆದುಕೊಳ್ಳುತ್ತದೆ, ಇದರಿಂದಾಗಿ ಈ ನಿರ್ಧಾರ ಪ್ರಾಯೋಗಿಕವಲ್ಲ ಎಂದು ಕಾಸರಗೋಡು ತಾಲೂಕು ಖಾಸಗೀ ಬಸ್ ಓನರ್ಸ್ ಅಸೋಸಿಯೇಶನ್ ಪ್ರಕಟಣೆಯಲ್ಲಿ ತಿಳಿಸಿದೆ.
         ರಸ್ತೆ ದುರಸ್ತಿಯಾಗುವವರೆಗೆ ಕೊಲ್ಲಂಗಾನ-ಕೋಟೆಕಣಿ-ಕೊರತ್ತಿಗುರಿ-ನೀರ್ಚಾಲ್ ಮಾರ್ಗವಾಗಿ ಸಂಚರಿಸಲು ಮಾತ್ರ ಸಾಧ್ಯವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries