ತಿರುವನಂತಪುರ: ಶಾಲಾ ಕಲೋತ್ಸವದಲ್ಲಿ ಮೋಸಕ್ಕೆ ಅವಕಾಶ ನೀಡುವುದಿಲ್ಲ ಎಂದು ಸಚಿವ ವಿ.ಶಿವನ್ ಕುಟ್ಟಿ ಹೇಳಿದ್ದಾರೆ. ಕಾರ್ಯಕ್ರಮಗಳ ಸಮಯಪಾಲನೆಯನ್ನು ಖಚಿತಪಡಿಸಿಕೊಳ್ಳಲಾಗುವುದು ಎಂದು ಶಿವನ್ ಕುಟ್ಟಿ ಹೇಳಿರುವರು.
ಸ್ಪರ್ಧೆಯ ಸ್ಥಳದಲ್ಲಿ ಚೆಸ್ಟ್ ಸಂಖ್ಯೆ ಕೂಗಿದಾಗ ಹಾಜರಿರದ ವಿದ್ಯಾರ್ಥಿಗಳು ಅವಕಾಶವನ್ನು ಕಳೆದುಕೊಳ್ಳುತ್ತಾರೆ. ಯಾವುದೇ ರೀತಿಯ ಮೋಸಕ್ಕೆ ಅವಕಾಶವಿಲ್ಲ ಎಂದು ಸಚಿವರು ತಿಳಿಸಿದ್ದಾರೆ.
ಮುಂದಿನ ವರ್ಷದಿಂದ ಶಾಲಾ ಕಲೋತ್ಸವ ವಿಜೇತರಿಗೆ ಬಹುಮಾನದ ಮೊತ್ತವನ್ನು 1000 ರೂ.ಗಳಿಂದ ಹೆಚ್ಚಿಸುವ ಕುರಿತು ಕ್ರಿಯಾಶೀಲ ಚಿಂತನೆ ನಡೆಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು. ಕೋಝಿಕ್ಕೋಡ್ ನಲ್ಲಿ ಪ್ರಸ್ತುತ ಜನವರಿ 1 ರಿಂದ 7 ರವರೆಗೆ ರಾಜ್ಯ ಶಾಲಾ ಕಲೋತ್ಸವವನ್ನು ಆಯೋಜಿಸುತ್ತಿದೆ.
ಕಲೋತ್ಸವದಲ್ಲಿ ಮೋಸಕ್ಕೆ ಅವಕಾಶ ನೀಡುವುದಿಲ್ಲ: ಸಚಿವ ಶಿವನ್ಕುಟ್ಟಿ
0
November 23, 2022