HEALTH TIPS

ಸೈಕಲ್ ನಲ್ಲಿ ಮಗು ಮತ್ತೆ ಹಿಂತಿರುಗುವ ಖಚಿತತೆ ನೀಡಬಹುದೇ? ಕೊಚ್ಚಿ ಕಾರ್ಪೋರೇಶನ್ ವಿರುದ್ಧ ಕೋರ್ಟ್ ಕಿಡಿ

             
           ಕೊಚ್ಚಿ: ಎರ್ನಾಕುಳಂ ಪನಂಬಿಲ್ಲಿನಗರದಲ್ಲಿ ತೆರೆದ ಚರಂಡಿಗೆ ಮಗು ಬಿದ್ದ ಘಟನೆಗೆ  ಹೈಕೋರ್ಟ್ ಆಘಾತ ವ್ಯಕ್ತಪಡಿಸಿದೆ.
            ಈ ಘಟನೆ ಆಘಾತಕಾರಿಯಾಗಿದೆ ಎಂದು ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಹೇಳಿದ್ದಾರೆ. ರಸ್ತೆ ಮತ್ತು ಪುಟ್ ಪಾತ್ ನಿರ್ವಹಣೆಯಲ್ಲಿ ಅಧಿಕಾರಿಗಳು ಗಂಭೀರವಾಗಿ ವಿಫಲರಾಗಿದ್ದಾರೆ ಎಂದು ನ್ಯಾಯಾಲಯ ಗಮನ ಗಮನ ಸೆಳೆದಿದೆ.
          ಕೊಚ್ಚಿ ಕಾರ್ಪೋರೇಷನ್ ಕಡೆಯಿಂದ ಕಾರ್ಯದರ್ಶಿ ನ್ಯಾಯಾಲಯಕ್ಕೆ ಹಾಜರಾದರು. ಚರಂಡಿಗಳನ್ನು ತೆರೆದಿರುವುದು ಸರಿಯೇ ಎಂದು ಪಾಲಿಕೆ ಕಾರ್ಯದರ್ಶಿಯನ್ನು ಕೋರ್ಟ್ ಪ್ರಶ್ನಿಸಿತು. ಈ ವಿಷಯಗಳನ್ನು ವಿವರಿಸಲು ನೇರವಾಗಿ ಅವರನ್ನು ಕರೆಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ.
           ಸಾರ್ವಜನಿಕ ಬೀದಿಗಳು ಕೇವಲ ವೃದ್ಧರ ಸಹಿತ ಸಾರ್ವಜನಿಕರಿಗೆ  ಮಾತ್ರವಲ್ಲ. ಮಕ್ಕಳಿಗೂ ಸೇರಿದೆ. ಚರಂಡಿಗೆ ಬಿದ್ದ ಮಗುವಿಗೆ ಏನಾದರೂ ಅವಘಡ ಸಂಭವಿಸಿದ್ದರೆ ಯಾರು ಸಮಾಧಾನ ಹೇಳುತ್ತಿದ್ದರು, ಅದೃಷ್ಟದಿಂದ ಮಗು ಪಾರಾಗಿದೆ ಎಂದು ನ್ಯಾಯಾಲಯ ಪಾಲಿಕೆಗೆ ತಿಳಿಸಿದೆ. ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಬೇಗ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನ್ಯಾಯಾಲಯ ಸೂಚಿಸಿದೆ.
          ಮಗು ಬೈಸಿಕಲ್‍ನೊಂದಿಗೆ ಹೊರಗೆ ಹೋದರೆ ಹಿಂತಿರುಗುವ ಬಗ್ಗೆ ನಿಮಗೆ ಖಚಿತವಾಗಿದೆಯೇ ಎಂದು ನ್ಯಾಯಾಲಯ ಪಾಲಿಕೆ ಕಾರ್ಯದರ್ಶಿಯನ್ನು ಕೇಳಿದೆ. ಕೊಚ್ಚಿ ಮೆಟ್ರೋ ಸಿಟಿ ಎಂಬುದನ್ನು ಮರೆಯಬೇಡಿ. ಫುಟ್ ಪಾತ್ ಹಾಗೂ ರಾಜಕಾಲುವೆಗಳಿಗೆ ನಗರಸಭೆಯೇ ಹೊಣೆಯಾಗಬೇಕು ಹಾಗೂ ಮುಂದೆ ಇಂತಹ ಅವಘಡಗಳು ಸಂಭವಿಸದಂತೆ ನೋಡಿಕೊಳ್ಳಬೇಕು ಎಂದು ನ್ಯಾಯಾಲಯ ಸೂಚಿಸಿದೆ. ಘಟನೆಯಲ್ಲಿ ಪಾಲಿಕೆ ಕಾರ್ಯದರ್ಶಿ ನ್ಯಾಯಾಲಯದಲ್ಲಿ ಕ್ಷಮೆಯಾಚಿಸಿದ್ದಾರೆ. ಎರಡು ವಾರದೊಳಗೆ ಚರಂಡಿ ಮುಚ್ಚಲಾಗುವುದು ಎಂದು ನಗರಸಭೆ ಕಾರ್ಯದರ್ಶಿ ತಿಳಿಸಿದರು. ಕಾರ್ಯದರ್ಶಿ ನೀಡಿದ ಭರವಸೆಯನ್ನು ನ್ಯಾಯಾಲಯ ದಾಖಲಿಸಿಕೊಂಡಿದೆ. ಡಿಸೆಂಬರ್ 2 ರಂದು ಮತ್ತೆ ಪ್ರಕರಣದ ವಿಚಾರಣೆ ನಡೆಯಲಿದೆ.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries