ಉಪ್ಪಳ : ಮುಳಿಂಜ ಶಾಲೆಯಲ್ಲಿ ಅಂತರಾಷ್ಟ್ರೀಯ ವಿಭಿನ್ನ ಸಾಮಥ್ರ್ಯ ಮಕ್ಕಳ ದಿನಾಚರಣೆ (ಐಡಿಪಿಡಿ) ಸಲುವಾಗಿ ಸರ್ಕಾರದ ನಿರ್ದೇಶನದಂತೆ ನಡೆಸಲ್ಪಡುವ ಸಾಪ್ತಾಹಿಕ ಕಾರ್ಯಕ್ರಮದ ಉದ್ಘಾಟನೆ ಇತ್ತೀಚೆಗೆ ಮಂಜೇಶ್ವರ ಬಿ. ಆರ್ ಸಿ. ಯ ತರಬೇತುದಾರ ಜೋಯ್ ಅವರು ಶಾಲೆಯಲ್ಲಿ ಸಿದ್ದಗೊಳಿಸಿದ ವಿಶಾಲ ಕ್ಯಾನ್ ವಾಸ್ ನಲ್ಲಿ ‘ನಿಮ್ಮೊಂದಿಗೆ ನಾವಿದ್ದೇವೆ’ ಎನ್ನವ ಬೆಂಬಲದ ಆಶಯವನ್ನು ಸಾರುವ ಬರಹವನ್ನು ಬರೆಯುವ ಮೂಲಕ ಉದ್ಘಾಟಿಸಿದರು.
ಮಂಗಲ್ಪಾಡಿ ಗ್ರಾಮ ಪಂಚಾಯತಿ ಸದಸ್ಯ ಶರೀಫ್ ಟಿ.ಯಂ ಉಪಸ್ಥಿತರಿದ್ದರು. ಶಾಲಾ ಮುಖ್ಯಶಿಕ್ಷಕಿ ಚಿತ್ರ್ರಾವತಿ ಚಿಗುರುಪಾದೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ರಿಯಾಸ್ ಯಂ ಯಸ್ ಸ್ವಾಗತಿಸಿ ಶಿಕ್ಷಕಿ ಧನ್ಯ ವಂದಿಸಿದರು. ಶಿಕ್ಷಕಿ ಅಬ್ಸ ನಿರೂಪಿಸಿದರು. ಬಳಿಕ ಶಾಲಾ ವಿಭಿನ್ನ ಸಾಮಥ್ರ್ಯ ಮಕ್ಕಳಿಗೆ ವಿವಿಧ ಸ್ಪರ್ಧೆ ಏರ್ಪಡಿಸಲಾಯಿತು.
ಮುಳಿಂಜ ಶಾಲೆಯಲ್ಲಿ ಅಂತರಾಷ್ಟ್ರೀಯ ವಿಭಿನ್ನ ಸಾಮಥ್ರ್ಯ ಮಕ್ಕಳ ದಿನಾಚರಣೆ ಉದ್ಘಾಟನೆ
0
December 03, 2022
Tags