ಕೊಚ್ಚಿ: ಸನಾತನ ಧರ್ಮ ಪ್ರಚಾರಕ್ಕಾಗಿ ಅಮೆರಿಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇರಳ ಹಿಂದೂಸ್ ಆಫ್ ನಾರ್ತ್ ಅಮೆರಿಕದ ಆರ್ಷದರ್ಶ ಪ್ರಶಸ್ತಿಯನ್ನು ಶ್ರೀಕುಮಾರನ್ ತಂಬಿ ಅವರಿಗೆ ಘೋಷಿಸಲಾಗಿದೆ.
ವೈದಿಕ ಸಾಹಿತ್ಯದ ಧರ್ಮ ಸಂದೇಶವನ್ನು ತನ್ನ ಬರಹಗಳ ಮೂಲಕ ಪ್ರತಿಬಿಂಬಿಸುವ ಮಲಯಾಳಿ ಲೇಖಕರನ್ನು ಈ ಪ್ರಶಸ್ತಿ ಗೌರವಿಸುತ್ತದೆ. ಪ್ರಶಸ್ತಿಯು ಒಂದು ಲಕ್ಷ ರೂ.ನಗದು, ಪ್ರಶಸ್ತಿ ಪತ್ರ ಮತ್ತು ಫಲಕ ಒಳಗೊಂಡಿದೆ.
ಸಿ. ರಾಧಾಕೃಷ್ಣನ್, ಪ್ರಭಾವವರ್ಮ, ಸೂರ್ಯಕೃಷ್ಣಮೂರ್ತಿ, ಕೆ.ಜಯಕುಮಾರ್ ಮತ್ತು ಪಿ.ಶ್ರೀಕುಮಾರ್ ಅವರನ್ನೊಳಗೊಂಡ ಸಮಿತಿಯು ಪ್ರಶಸ್ತಿಯನ್ನು ನಿರ್ಧರಿಸಿದೆ. ಕವಿ, ಗೀತರಚನೆಕಾರ, ಚಿತ್ರಕಥೆಗಾರ, ನಿರ್ದೇಶಕ ಮತ್ತು ನಿರ್ಮಾಪಕರಾಗಿ, ಶ್ರೀಕುಮಾರನ್ ತಂಬಿ ಅವರು ಚಿತ್ರರಂಗದ ಎಲ್ಲಾ ಹಂತಗಳಲ್ಲಿ ಅಳಿಸಲಾಗದ ಛಾಪು ಮೂಡಿಸಿದ, ಮಲಯಾಳಂ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಮತ್ತು ಆರ್ಷಭಾರತ ಸಂಸ್ಕøತಿಯ ಮೂಲ ಮೌಲ್ಯಗಳನ್ನು ತ್ಯಜಿಸದೆ ತಮ್ಮ ಜೀವನವನ್ನು ನಡೆಸಿದ ಪ್ರತಿಭೆ. ಸಮಿತಿ ಅಧ್ಯಕ್ಷ ಸಿ. ರಾಧಾಕೃಷ್ಣನ್ ತಿಳಿಸಿದ್ದಾರೆ.
ವಿವಿಧ ಹಂತಗಳಲ್ಲಿ ಅವರ ಕೊಡುಗೆಗಳು ನಮ್ಮ ಸಾಂಸ್ಕೃತಿಕ ಜೀವನಕ್ಕೆ ಅಮೂಲ್ಯವಾದ ಆಸ್ತಿ. ದಶಕಗಳಿಂದ ಕಾವ್ಯ, ಗಾಯನಕ್ಕೆ ನೀಡುತ್ತಿರುವ ಸೇವೆ ಮಲಯಾಳಂ ಭಾμÉಯ ಪುನರುತ್ಥಾನ ಹಾಗೂ ಬಲವರ್ಧನೆಗೆ ಕಾರಣವಾಗಿದ್ದು, ಹಾಲಿನಲ್ಲಿ ಸಕ್ಕರೆಯಂತೆ ಶ್ರೀಕುಮಾರಂತಂಬಿಯವರ ಹಾಡುಗಳಲ್ಲಿ ಸಾಂಸ್ಕೃತಿಕ ಸತ್ವ ತುಂಬಿದೆ ಎಂದು ಸಮಿತಿ ಹೇಳಿದೆ. ಹಿಂದಿನ ವರ್ಷಗಳಲ್ಲಿ ಅಖಿತಮ್ ಮತ್ತು ಸಿ ರಾಧಾಕೃಷ್ಣನ್ ಅವರಿಗೆ ಪ್ರಶಸ್ತಿ ನೀಡಲಾಗುತ್ತಿದೆ.
ಜನವರಿ 28ರಂದು ತಿರುವನಂತಪುರಂನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕೇರಳ ಹಿಂದೂಸ್ ಆಫ್ ನಾರ್ತ್ ಅಮೆರಿಕ ಟ್ರಸ್ಟಿಗಳ ಮಂಡಳಿ ಅಧ್ಯಕ್ಷ ರಾಮದಾಸ್ಪಿಳ್ಳ ತಿಳಿಸಿದ್ದಾರೆ.
ಕವಿ ಶ್ರೀಕುಮಾರನ್ ತಂಬಿಗೆ ಆರ್ಷದರ್ಶ ಪ್ರಶಸ್ತಿ
0
December 24, 2022
Tags