ಉಪ್ಪಳ: ಕೆ.ಎಸ್.ಬಿ.ಎ(ಕೇರಳ ಸ್ಟೇಟ್ ಬಾರ್ಬರ್ಸ್ ಅಸೋಸಿಯೇಶನ್) ವನಿತಾ ವಿಂಗ್ ತಾಲೂಕು ಸಮ್ಮೇಳನ ಉಪ್ಪಳ ತ್ರಿಭುವನ್ ಹೋಟೆಲ್ ಆಡಿಟೋರಿಯಂನಲ್ಲಿ ಜರಗಿತು. ಮಂಜೇಶ್ವರ ಗ್ರಾ.ಪಂ. ಅಧ್ಯಕ್ಷೆ ಜೀನ್ ಲವೀನ ಮೊಂತೇರೋ ಉದ್ಘಾಟಿಸಿ ಮಾತನಾಡಿದರು. ಶ್ಯಾಮಾ ನಾಯರ್ ಪಿ. ಅಧ್ಯಕ್ಷತೆ ವಹಿಸಿದ್ದರು. ಎ.ಪಿ.ನಾರಾಯಣನ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಆರ್.ರಮೇಶನ್ ಸಂಘಟನಾ ವರದಿ ಮಂಡಿಸಿದರು. ಆಸ್ಮಿಯ ಹಾರೀಸ್, ಸಾಜಿದ ಮತ್ತು ಹಾರೀಸ ಉಪಸ್ಥಿತರಿದ್ದರು. ಕೆ.ಗೋಪಿ, ಎಂ.ಗೋಪಿ, ಆರ್ ನಟರಾಜನ್, ಎನ್. ಆರ್.ಕೃಷ್ಣ ಭಂಡಾರಿ, ಎನ್ ವೀರ, ಎನ್ ಸೇತು, ಸಂಜೀವ ಭಂಡಾರಿ ಶುಭಾಶಂಸನೆಗೈದರು.
ಈ ಸಂದರ್ಭ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಕೆ.ಎಸ್.ಬಿ.ಎ ತಾಲೂಕು ಅಧ್ಯಕ್ಷರಾಗಿ ವೈಶಾಲಿ, ಕಾರ್ಯದರ್ಶಿಯಾಗಿ ಯೋಗಿತಾರಾಣಿ, ಕೋಶಾಧಿಕಾರಿಯಾಗಿ ಸುಪ್ರಭ ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ಸರೀತ ಖುಷಿ ಸೀತಾಂಗೋಳಿ, ರೇವತಿ ಕುಂಬ್ಲೆ ಅವರನ್ನು ಆಯ್ಕೆ ಮಾಡಲಾಯಿತು.
ಸತ್ಯನಾರಾಯಣ ಬಿ. ಹಾಗೂ ಸತ್ಯನಾರಾಯಣ ಬದಿಯಡ್ಕ ಪರಿಚಯಿಸಿದರು. ಯೋಗಿತಾರಾಣಿ ಪ್ರಾರ್ಥನೆಗೈದರು. ಸುನೀತಾ ಕುಲಾಲ್ ಸ್ವಾಗತಿಸಿ, ಆಯಿಷ ವಂದಿಸಿದರು.
ಕೆ.ಎಸ್.ಬಿ.ಎ ತಾಲೂಕು ಸಮ್ಮೇಳನ
0
December 22, 2022
Tags