ಮಂಜೇಶ್ವರ: ವಿದ್ಯೆಯ ಜತೆ ಕಲೆ ಮತ್ತು ಸಾಂಸ್ಕೃತಿಕ ಶಿಕ್ಷಣ ನೀಡಿ ಮಾನವತೆ ಬೆಳೆಸುವ ಉದ್ದೇಶದೊಂದಿಗೆ ಮೀಯಪದವಿನ ಶ್ರೀ ವಿದ್ಯಾವರ್ಧಕ ಹಯರ್ ಸೆಕೆಂಡರಿ ಶಾಲೆಯಲ್ಲಿ ವಿದ್ಯಾವರ್ಧಕ ಸಂಘದ ಸಹಕಾರದಿಂದ ನೂತನ ನಾರಾಯಣೀಯಂ ರಂಗಮಂದಿರದಲ್ಲಿ "ವಿಕಾಸ" ಸಾಂಸ್ಕೃತಿಕ ಸಂಘಟನೆ ಉದ್ಘಾಟನೆಗೊಂಡಿದೆ.
ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಯವರು ದೀಪಬೆಳಗಿಸಿ, ಬ್ರಹ್ಮಶ್ರೀ ತಂತ್ರಿ ಉಳಿಯತ್ತಾಯ ವಿಷ್ಣು ಅಸ್ರ ಫಲಕ ಅನಾವರಣ ಗೊಳಿಸುವುದರೊಂದಿಗೆ ಉದ್ಘಾಟನೆ ಜರುಗಿತು.
ಶಾಲಾ ಸಂಚಾಲಕಿ ಪ್ರೇಮಾ ಕೆ ಭಟ್ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ ಮೀಂಜ ಪಂ. ಅಧ್ಯಕ್ಷೆ ಸುಂದರಿ ಆರ್ ಶೆಟ್ಟಿ, ಕಣಿಪುರ ಯಕ್ಷಗಾನ ಮಾಸಪತ್ರಿಕೆ ಸಂಪಾದಕ ಎಂ. ನಾ. ಚಂಬಲ್ತಿಮಾರ್ ಪಾಲ್ಗೊಂಡರು. ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಆಶಯ ಭಾಷಣ ಮಾಡಿದರು. ರಾಜಾರಾಮ ಮಾಸ್ತರ್ ಮೀಯಪದವು ಸ್ವಾಗತಿಸಿದರು ನಿರೂಪಿಸಿದರು. ಕಿರಣ್ ಪ್ರಸಾದ ಕುದ್ರೆಕೋಡ್ಳು ವಂದಿಸಿದರು.
ಕಾರ್ಯಕ್ರಮದ ಅಂಗವಾಗಿ ಮೊದಲಿಗೆ ದಿವಾಣ ಶಿವಶಂಕರ ಭಟ್ ನಿರ್ದೇಶನದಲ್ಲಿ ಶ್ರೀ ವಿದ್ಯಾವರ್ಧಕ ಹಯರ್ ಸೆಕಂಡರಿ ಶಾಲಾ ವಿದ್ಯಾರ್ಥಿಗಳಿಂದ "ತರಣಿಸೇನ ಕಾಳಗ " ಯಕ್ಷಗಾನ ಪ್ರದರ್ಶನ ಗೊಂಡಿತು. ಬಳಿಕ ಹನುಮಗಿರಿ ಮೇಳದವರಿಂದ ಪಾಂಡವಾಶ್ವಮೇಧ ಬಯಲಾಟ ಜರಗಿತು. ಶಾಲೆ ಕೇಂದ್ರೀಕರಿಸಿ ಊರಿನ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲು ಪೆÇ್ರೀತ್ಸಾಹಿಸುವ ಉದ್ದೇಶದಿಂದ 'ವಿಕಾಸ' ಅಸ್ತಿತ್ವಕ್ಕೆ ಬಂದಿದೆ.