HEALTH TIPS

ಕರ್ನಾಟಕ ಪ್ರವೇಶಿಸಲಿರುವ ಬೃಹತ್ ಟ್ರಕ್‍ಗಳು; ತಾಮರಸ್ಸೆರಿ ಪಾಸ್ ನಲ್ಲಿ ಸಂಚಾರ ನಿಯಂತ್ರಣ


             ವಯನಾಡು: ಗುರುವಾರದಿಂದ ತಾಮರಸ್ಸೆರಿ ಪಾಸ್ ಮೂಲಕ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ರಾತ್ರಿ ಎಂಟರಿಂದ ನಿರಂತರ ಜಾರಿಗೆ ಬರಲಿದೆ.
        ಕರ್ನಾಟಕಕ್ಕೆ ತೆರಳುವ ಭಾರಿ ಟ್ರಕ್‍ಗಳು ಈ ಪಾಸ್ ಮೂಲಕ ಹಾದು ಹೋಗುವ ಹಿನ್ನೆಲೆಯಲ್ಲಿ ಸಂಚಾರ ನಿರ್ಬಂಧ ಹೇರಲಾಗಿದೆ.
           ರಾತ್ರಿ 11 ರಿಂದ ಬೆಳಗ್ಗೆ 5 ಗಂಟೆಯವರೆಗೆ ಟ್ರಕ್‍ಗಳಿಗೆ ಪಾಸ್ ಅನ್ನು ದಾಟಲು ಅನುಮತಿಸಲಾಗಿದೆ. ಇತರ ಪ್ರಯಾಣಿಕರು ಈ ಸಮಯದಲ್ಲಿ ಪ್ರಯಾಣಕ್ಕಾಗಿ ಪರ್ಯಾಯ ಮಾರ್ಗವನ್ನು ಬಳಸಬೇಕು. ಸುಲ್ತಾನ್ ಬತ್ತೇರಿ ಕಡೆಯಿಂದ ಕೋಝಿಕ್ಕೋಡ್ ಕಡೆಗೆ ಹೋಗುವ ದೊಡ್ಡ ವಾಹನಗಳು ಬೀನಾಚಿ-ಪನಮರಮ್, ಮೀನಂಗಡಿ-ಪಚಿಲಕಾಡ್ ಮಾರ್ಗವಾಗಿ ಅಥವಾ ಪಕ್ರತಾಲಂ ಪಾಸ್ ಮೂಲಕ ಹೋಗಬೇಕು. ಮಾನಂತವಾಡಿ ಕಡೆಯಿಂದ ಬರುವ ವಾಹನಗಳೂ ಇದೇ ಮಾರ್ಗವಾಗಿ ಸಂಚರಿಸಬೇಕು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
      ಸುಲ್ತಾನ್ ಬತ್ತೇರಿ ಮತ್ತು ಮಾನಂತವಾಡಿಯಿಂದ ಕೋಝಿಕೋಡ್‍ಗೆ ಹೋಗುವ ಬಸ್‍ಗಳು ರಾತ್ರಿ 9 ಗಂಟೆಯ ನಂತರ ವಕ್ಷಿಂತರ ಮೂಲಕ ತೆರಳಬೇಕು. ಬತ್ತೇರಿ ಮತ್ತು ಕಲ್ಪಟ್ಟ ಭಾಗಗಳಿಂದ ತ್ರಿಶೂರ್ ಮತ್ತು ಮಲಪ್ಪುರಂ ಭಾಗಗಳಿಗೆ ಹೋಗುವ ವಾಹನಗಳು ತಮಿಳುನಾಡು ನಾಡುಕಣಿ ಪಾಸ್ ಮೂಲಕ ಹೋಗಬೇಕು. ರಾತ್ರಿ 9 ಗಂಟೆಯ ನಂತರ ಕಲ್ಪಟ್ಟಾ, ಮೆಪ್ಪಾಡಿ ಮತ್ತು ವೆಸ್ಟ್ ತೆರದಿಂದ ವೈತಿರಿ ಮೂಲಕ ಕೋಝಿಕ್ಕೋಡ್‍ಗೆ ಸಂಚಾರವನ್ನು ಸಂಪೂರ್ಣವಾಗಿ ನಿμÉೀಧಿಸಲಾಗಿದೆ. ಈ ಮಾರ್ಗದಲ್ಲಿ ರಾತ್ರಿ ವೇಳೆ ಆಂಬ್ಯುಲೆನ್ಸ್‍ಗಳಿಗೆ ಮಾತ್ರ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ.
           ಟ್ರಕ್‍ಗಳು ಯಂತ್ರಗಳೊಂದಿಗೆ ಕರ್ನಾಟಕದ ನಂಜಾಂಗ್‍ನಲ್ಲಿರುವ ಕಾರ್ಖಾನೆಗೆ ಹೋಗುತ್ತವೆ. ಈ ಯಂತ್ರಗಳು ಸುಮಾರು 16 ಅಡಿ ಅಗಲ ಮತ್ತು ಇಪ್ಪತ್ತು ಅಡಿ ಎತ್ತರವಿದೆ. ಆದ್ದರಿಂದ, ಮೇಲೇರುವಾಗಿನ ಕಠಿಣತೆಯ ಹಿನ್ನೆಲೆಯಲ್ಲಿ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಸಂಚಾರ ನಿಯಂತ್ರಣ ಮಾಡಲಾಗಿದೆ.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries