HEALTH TIPS

ವೇತನ ಬಿಕ್ಕಟ್ಟಿನಿಂದ ಮೇಲೇರದ ಕೆ.ಎಸ್.ಆರ್.ಟಿ.ಸಿ: 225 ಕೋಟಿ ಆದಾಯ


               ತಿರುವನಂತಪುರಂ: ಡಿಸೆಂಬರ್‍ನಲ್ಲಿ 225 ಕೋಟಿ ಆದಾಯ ಗಳಿಸಿದ್ದರೂ ಕೆಎಸ್‍ಆರ್‍ಟಿಸಿ ನೌಕರರಿಗೆ ಇನ್ನೂ ವೇತನ ಪಾವತಿಯಾಗಿಲ್ಲ.
                ಸಂಬಳಕ್ಕಾಗಿ 80 ಕೋಟಿ ರೂ. ಬೇಕಾಗಿ ಬರಲಿದೆ. ಆಡಳಿತ ಮಂಡಳಿ ಮತ್ತು ಕಾರ್ಮಿಕ ಸಂಘಟನೆಗಳ ನಡುವಿನ ಸರಕಾರ ಮಧ್ಯಸ್ಥಿಕೆ ಒಪ್ಪಂದದ ಪ್ರಕಾರ ಪ್ರತಿ ತಿಂಗಳು 5ನೇ ತಾರೀಖಿನಂದು ವೇತನ ನೀಡಬೇಕು. ಆದರೆ ಡಿಸೆಂಬರ್ ತಿಂಗಳ ಸಂಬಳವನ್ನು ಗುರುವಾರವೂ ನೀಡಿಲ್ಲ.  50 ಕೋಟಿ ಸರ್ಕಾರದ ನೆರವು ಸಿಗದ ಕಾರಣ ವೇತನ ವಿತರಣೆ ವಿಳಂಬವಾಗಿದೆ ಎಂಬುದು ವಿವರಣೆ.
                 ಡೀಸೆಲ್ ಮೊತ್ತ ಮತ್ತು ಇತರ ಖರ್ಚುಗಳ ನಂತರ, ಮಾಸಿಕ ಆದಾಯದಲ್ಲಿ ಯಾವುದೇ ಹೆಚ್ಚುವರಿ ಮೊತ್ತ ಜಮೆಯಾಗಿಲ್ಲ ಎಂದು ಆಡಳಿತ ಮಂಡಳಿ ಹೇಳಿದೆ. ಡಿ.16ರಂದು ಆರ್ಥಿಕ ನೆರವು ಕೋರುವ ಪತ್ರವನ್ನು ಹಸ್ತಾಂತರಿಸಲಾಗಿದೆ. ಆದರೆ ಸರಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಉದ್ದೇಶಪೂರ್ವಕವಾಗಿಯೇ ವೇತನ ತಡೆಹಿಡಿಯಲಾಗಿದೆ ಎಂದು ಸಂಘಟನೆಗಳು ಆರೋಪಿಸಿವೆ. 5ರ ಮೊದಲು ವೇತನ ನೀಡುವುದಾಗಿ ಮುಖ್ಯಮಂತ್ರಿಗಳ ಭರವಸೆಯನ್ನು ಹೊಸ ವರ್ಷದಲ್ಲಾದರೂ ಈಡೇರಿಸದಿದ್ದರೆ ಮುಷ್ಕರ ಸೇರಿದಂತೆ ಕ್ರಮಕೈಗೊಳ್ಳುವುದಾಗಿ ಸಂಘಟನೆಗಳು ತಿಳಿಸಿದ್ದವು.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries