ತಿರುವನಂತಪುರಂ: ಜನವರಿ 23ರಿಂದ ಕೇರಳದ 15ನೇ ವಿಧಾನಸಭೆಯ ಎಂಟನೇ ಅಧಿವೇಶನ ಕರೆಯುವಂತೆ ರಾಜ್ಯಪಾಲರಿಗೆ ಶಿಫಾರಸು ಮಾಡಲು ಸಂಪುಟ ಸಭೆ ನಿರ್ಧರಿಸಿದೆ.
ರಾಜ್ಯಪಾಲರ ನೀತಿ ಘೋಷಣೆ ಭಾಷಣದ ಕರಡು ಸಿದ್ಧಪಡಿಸುವ ಹೊಣೆಯನ್ನು ಸಂಪುಟ ಉಪ ಸಮಿತಿಗೆ ವಹಿಸಲಾಗಿದೆ. ಈ ಹಿಂದೆ ರಾಜ್ಯಪಾಲರ ಜತೆಗಿನ ಶೀತಲ ಸಮರ ನಡೆಯುತ್ತಿರುವ ಹಿನ್ನೆಲೆಯಲ್ಲಿ ನೀತಿ ಘೋಷಣೆ ತಪ್ಪಿಸಲು ವಿಧಾನಸಭೆ ಕಲಾಪ ಮುಕ್ತಾಯಗೊಳಿಸಿದ್ದನ್ನು ರಾಜ್ಯಪಾಲರಿಗೆ ತಿಳಿಸದೆ ಮತ್ತೆ ಅಧಿವೇಶನ ಮುಂದುವರಿಸಲು ಸರ್ಕಾರ ಮುಂದಾಗಿದೆ ಎಂದು ವರದಿಯಾಗಿದೆ.
ಜನವರಿ 23ರಿಂದ ವಿಧಾನಸಭೆ ಅಧಿವೇಶನ; ರಾಜ್ಯಪಾಲರ ನೀತಿ ಘೋಷಣೆ ಭಾಷಣದ ಕರಡು ಸಿದ್ಧಪಡಿಸಲು ಸಂಪುಟ ಉಪ ಸಮಿತಿ
0
January 05, 2023