ಪೆರ್ಲ: ಕೇರಳ ರಾಜ್ಯ ಕುಟುಂಬಶ್ರೀ 25ನೇ ವμರ್Áಚರಣೆಯ ಹಿನ್ನಲೆಯಲ್ಲಿ ಎಣ್ಮಕಜೆ ಕುಟುಂಬಶ್ರೀ ಸಿಡಿಎಸ್ ಸಮಿತಿ ವತಿಯಿಂದ ಪ್ರಚಾರ ಮೆರವಣಿಗೆ ಪೆರ್ಲ ಪೇಟೆಯಲ್ಲಿ ಜರಗಿತು. ಕುಟುಂಬಶ್ರೀ ಸಿಡಿಎಸ್ ಹಾಗೂ ಎಡಿಎಸ್ ಸದಸ್ಯರುಗಳ ಸಹಭಾಗಿತ್ವದಲ್ಲಿ ಪಂಚಾಯತಿ ಕಚೇರಿ ಬಳಿಯಿಂದ ಹೊರಟ ಮೆರವಣಿಗೆ ಪೆರ್ಲ ಪೇಟೆಯಲ್ಲಿ ಸಮಾಪ್ತಿಗೊಂಡಿತು. ಈ ಸಂದರ್ಭದಲ್ಲಿ ಸಿಡಿಎಸ್ ಅಧ್ಯಕ್ಷೆ ಜಲಜಾಕ್ಷಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಂ.ಕ್ಷೇಮ ಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸೌಧಾಭಿ ಹನೀಫ್, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಶ್ರೀ ಕುಲಾಲ್, ಸಿಡಿಎಸ್ ಉಪಾಧ್ಯಕ್ಷೆ ಶಶಿಕಲಾ ಸ್ವರ್ಗ, ಕುಟುಂಬಶ್ರೀ ಲೆಕ್ಕ ಪರಿಶೋಧಕಿ ಸುನೀತಾ, ಮಾಜಿ ಪಂ.ಉಪಾಧ್ಯಕ್ಷೆ ಆಯಿμÁ ಎ.ಎ.ಮೊದಲಾದವರು ಮಾತನಾಡಿದರು. ಬಳಿಕ ಪಂಚಾಯತಿ ಸಭಾಂಗಣದಲ್ಲಿ ನಡೆದ ಕುಟುಂಬಶ್ರೀ ವಾರ್ಷಿಕ ಮಹಾಸಭೆಯಲ್ಲಿ ಉದಯೋನ್ಮುಖ ಕವಯತ್ರಿ ನಿರ್ಮಲಾ ಶೇಷಪ್ಪ ಅವರನ್ನು ಗೌರವಿಸಲಾಯಿತು ಈ ಸಂದರ್ಭದಲ್ಲಿ ಕುಟುಂಬಶ್ರೀ ಬಗ್ಗೆ ನಿರ್ಮಲಾ ಶೇಷಪ್ಪ ರಚಿಸಿದ ಹಾಡಿಗೆ ಸದಸ್ಯರು ಧ್ವನಿಗೂಡಿಸಿ ರಂಜಿಸಿದರು.
ಪೆರ್ಲ ಪೇಟೆಯಲ್ಲಿ ಕುಟುಂಬಶ್ರಿ 25ನೇ ವಾರ್ಷಿಕೋತ್ಸವ ಪ್ರಚಾರ ಮೆರವಣಿಗೆ
0
January 25, 2023