ಕಾಸರಗೋಡು: ಜಿಲ್ಲಾ ಕ್ರೀಡಾ ಅಕಾಡೆಮಿಯಿಂದ ಎಸ್.ನೀರಜ್, ವಿ.ಶ್ರೀಶಾಂತ್ ಮತ್ತು ಸಬ್ ಜೂನಿಯರ್ ವಿಭಾಗದಲ್ಲಿ ಆರ್.ಅಮಲ್ದಾಸ್ 2022-23ನೇ ಸಾಲಿನ ರಾಷ್ಟ್ರೀಯ ಶಾಲಾ ಕಬಡ್ಡಿ ಪಂದ್ಯಾವಳಿಯಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿ ಆಡಲು ಅರ್ಹತೆ ಪಡೆದಿದ್ದಾರೆ. 21 ರಿಂದ 24 ರವರೆಗೆ ರಾಜ್ಯ ಶಾಲಾ ಕಬಡ್ಡಿ ಪಂದ್ಯಾಟ ಕಾಞಂಗಾಡಿನ ದುರ್ಗಾ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದಿತ್ತು. ಕಾಸರಗೋಡು ಜಿಲ್ಲಾ ತಂಡವು ಸೀನಿಯರ್, ಜೂನಿಯರ್ ಮತ್ತು ಸಬ್ ಜೂನಿಯರ್ ವಿಭಾಗಗಳಲ್ಲಿ ಚಾಂಪಿಯನ್ ಶಿಪ್ ಗೆದ್ದುಕೊಂಡಿತು. ಅವರಲ್ಲಿ ಮೂವರು ಜಿಲ್ಲಾ ಕ್ರೀಡಾ ಅಕಾಡೆಮಿಯಲ್ಲಿ ಉತ್ತೀರ್ಣರಾಗಿದ್ದಾರೆ. ಕ್ರೀಡಾ ಹಾಸ್ಟೆಲ್ ತರಬೇತುದಾರ ಗಣೇಶ್ ಕಾಸರಗೋಡು ಇವರಿಗೆ ತರಬೇತಿ ನೀಡಿದ್ದಾರೆ.
ರಾಷ್ಟ್ರೀಯ ಶಾಲಾ ಕಬಡ್ಡಿ ಪಂದ್ಯಾಟ: ಜಿಲ್ಲಾ ಕ್ರೀಡಾ ಅಕಾಡೆಮಿಯಿಂದ 3 ಮಂದಿ ಆಯ್ಕೆ
0
January 25, 2023