ಬದಿಯಡ್ಕ: ಪುರಾತನ ಪ್ರಸಿದ್ದ ಎಡನೀರು ಶ್ರೀವಿಷ್ಣುಮಂಗಲ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಶ್ರೀಮದ್ ಎಡನೀರು ಮಠಾಧೀಶ ಶ್ರೀಮದ್ ಸಚ್ಚಿದಾನಂದ ಭಾರತೀ ಶ್ರೀಗಳ ನೇತೃತ್ವದಲ್ಲಿ ಫೆ.13 ರಿಂದ 17ರ ವರೆಗೆ ಜರಗಲಿದೆ.
ಉತ್ಸವದ ಯಶಸ್ವಿ ನಿರ್ವಹಣೆಗೆ ಪೂರ್ವಭಾವೀ ಸಮಾಲೋಚನ ಸಭೆ ಇಂದು(ಜ.25) ಸಂಜೆ 5 ಕ್ಕೆ ಶ್ರೀಮದ್.ಎಡನೀರು ಮಠದಲ್ಲಿ ನಡೆಯಲಿದೆ.ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುವಂತೆ ವಿನಂತಿಸಲಾಗಿದೆ.
ವಿಷ್ಣುಮಂಗಲ ದೇವಸ್ಥಾನ ಜಾತ್ರೆ: ಪೂರ್ವಭಾವೀ ಸಭೆ ಇಂದು
0
January 25, 2023
Tags