HEALTH TIPS

ಇಂದಿನಿಂದ ಬಳ್ಳಂಬೆಟ್ಟು ಶ್ರೀಶಾಸ್ತಾರ ದೇವಸ್ಥಾನ ಬ್ರಹ್ಮಕಲಶೋತ್ಸವ


       ಬದಿಯಡ್ಕ: ಉಕ್ಕಿನಡ್ಕ ಸನಿಹದ ಬಳ್ಳಂಬೆಟ್ಟು ಪರಿವಾರ ಸಹಿತ ಶ್ರೀ ಶಾಸ್ತಾರ ಸ್ವಾಮಿ ದೇವಸ್ಥಾನದಲ್ಲಿ ಪುನ: ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಜ. 24ರಿಂದ 26ರ ವರೆಗೆ ಜರುಗಲಿದೆ. ಬ್ರಹ್ಮಶ್ರೀ ವೇದಮೂರ್ತಿ ಗಣೇಶ ತಂತ್ರಿ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ, ವೈದಿಕ ಕಾರ್ಯಕ್ರಮಗಳು ಜರುಗಲಿದೆ.
           ಪ್ರತಿ ದಿನ ವಿವಿಧ ತಮಡಗಳಿಂದ ಭಜನೆ ನಡೆಯುವುದು. 24ರಂದು ಬೆಳಗ್ಗೆ ನವಗ್ರಹಶಾಂತಿ, ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ, ಸಂಜೆ 5ಕ್ಕೆ ಕ್ಷೇತ್ರಕ್ಕೆ ಆಗಮಿಸಲಿರುವ ತಂತ್ರಿವರ್ಯರಿಗೆ ಪೂರ್ಣಕುಂಭ ಸ್ವಾಗತ, ವಿವಿಧ ವೈದಿಕ ಕಾರ್ಯಕ್ರಮ ಜರುಗಲಿದೆ. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ 6ಕ್ಕೆ ಸಿತಾರ್‍ವಾದನ, ರಾತ್ರಿ 8ಕ್ಕೆ ಹನುಮಗಿರಿ ಮೇಳದವರಿಂದ ಯಕ್ಷಗಾನ ಬಯಲಾಟ ಜರುಲಿರುವುದು. 25ರಂದು ಬೆಳಗ್ಗೆ 5ಕ್ಕೆ ಗಣಪತಿ ಹವನ, ಮಧ್ಯಾಹ್ನ ಬ್ರಹ್ಮಕಲಶ ಪೂಜೆ, ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ 6ಕ್ಕೆ ಭಕ್ತಿರಸಮಂಜರಿ, ರಾತ್ರಿ 8ಕ್ಕೆಸೀಮಿತ ಪೈ ಬಳ್ಳಂಬೆಟ್ಟು ಅವರಿಂದ ಭರತನಾಟ್ಯ, 8.30ಕ್ಕೆ ವಿಠಲ ನಾಯಕ್ ಕಲ್ಲಡ್ಕ ಬಳಗದವರಿಂದ ಗೀತಾಸಾಹಿತ್ಯ ಸಂಭ್ರಮರಾತ್ರಿ 10.30ರಿಂದ ಬಪ್ಪನಾಡು ಮೇಳದವರಿಂದ ಯಕ್ಷಗಾನ ಬಯಲಾಟ ಜರುಗಲಿದೆ.
          26ರಂದು ಬೆಳಗ್ಗೆ 6ಕ್ಕೆ ಗಣಪತಿ ಹವನ, 10.58ರಿಂದ 11.30ರ ಒಳಗೆ ಶ್ರೀ ಶಾಸ್ತಾರ ಮತ್ತು ಪರಿವಾರ ದೇವರ ಸಾನ್ನಿಧ್ಯ ಪ್ರತಿಷ್ಠಾ ಕಲಶಾಭಿಷೇಕ, ಜೀವಕಲಶಾಭಿಷೇಕ ನಡೆಯುವುದು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ 1ಕ್ಕೆ ಯಕ್ಷಗಾನ ತಾಳಮದ್ದಳೆ, ಸಂಜೆ 4.30ಕ್ಕೆ ಧಾರ್ಮಿಕ ಸಭೆ ನಡೆಯುವುದು. ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡುವರು. ಬ್ರಹ್ಮಶ್ರೀ ವೆದಮೂರ್ತಿ ಗಣೇಶ ತಂತ್ರಿ ಅನುಗ್ರಹ ಭಾಷಣ ಮಾಡುವರು.ಆಡಳಿತ ಮೊಕ್ತೇಸರ ಶ್ರೀಧರ ಪೈ ಬಳ್ಳಂಬೆಟ್ಟು ಅಧ್ಯಕ್ಷತೆ ವಹಿಸುವರು. ವೇದಮೂರ್ತಿ ವಿದ್ವಾನ್ ಡಾ. ಕೇಶವಕಿರಣ್ ಭಟ್ ಬಾಕಿಲಪದವು ಧಾರ್ಮಿಕ ಭಾಷಣ ಮಾಡುವರು. ಸಂಜೆ 7.30ಕ್ಕೆ ಭಜನ್ ಸಂಧ್ಯಾ, 8.30ಕ್ಕೆ 'ಸತ್ಯೊದ ಅಜ್ಜೆ'ಯಕ್ಷಗಾನ ಬಯಲಾಟ ನಡೆಯುವುದು.

 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries